ನವದೆಹಲಿ : ಬ್ಯಾಂಕ್ಗಳಿಗೆ ಹೊಸ ನೋಟುಗಳನ್ನು ರವಾನಿಸಲು ಡೆಡ್ಲೈನ್ ಫಿಕ್ಸ್ ಮಾಡಿದ್ದು, ಮುಂದಿನ ಆರು ದಿನಗಳೊಳಗೆ ಬ್ಯಾಂಕ್ಗಳಿಗೆ ಹೊಸ ನೋಟುಗಳನ್ನು ರವಾನೆ ಮಾಡುವಂತೆ ಕೇಂದ್ರ ಸರ್ಕಾರ ನಿರ್ಧರಿಸಿದೆ.
ದೇಶಾದ್ಯಂತ ಆರ್ಥಿಕ ಬಿಕ್ಕಟ್ಟು ಮುಂದುವರೆದಿದ್ದು, ನೋಟು ನಿಷೇಧ ಮಾಡಿ 12 ದಿನ ಕಳೆದರೂ ಜನರು ಬ್ಯಾಂಕ್ಗಳ ಮುಂದೆ ಸಾಲಾಗಿ ನಿಲ್ಲುವುದು ಮುಂದುವರೆದಿದೆ. ಹೊಸ ನೋಟುಗಳ ಅಭಾವದಿಂದ ಕೆಲ ಬ್ಯಾಂಕ್ಗಳು ನೋಟು ನಿಷೇಧದ ನಂತರದ ಮೊದಲ ವಾರದಲ್ಲಿ ಹೆಚ್ಚುವರಿ ಸಮಯ ಕಾರ್ಯ ನಿರ್ವಹಿಸಿದಂತೆ ನಂತರದ ದಿನಗಳಲ್ಲಿ ನಿರ್ವಹಿಸಲಿಲ್ಲ. ಇದರಿಂದಾಗಿ ಜನರು ಆಕ್ರೋಶಗೊಂಡಿದ್ದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಬ್ಯಾಂಕ್ಗಳಿಗೆ ಹಣ ರವಾನೆಗೆ ನೀಡಲಾಗಿದ್ದ 21 ದಿನಗಳ ಕಾಲಾವಕಾಶವನ್ನು 6 ದಿನಕ್ಕೆ ಕಡಿತಗೊಳಿಸಿದೆ.
ಇದಕ್ಕಾಗಿ ಎಲ್ಲಾ ಬಗೆಯ ಸಾರಿಗೆ ಸೇವೆಯನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ವಾಯು, ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಹಣ ರವಾನೆ ಮಾಡಲು ನಿರ್ಧರಿಸಿದೆ. ತುರ್ತು ಅಗತ್ಯಗಳಿಗಾಗಿ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಮತ್ತು ವಾಯುಪಡೆಯ ವಿಮಾನಗಳನ್ನೂ ಬಳಸಿಕೊಳ್ಳಬಹುದು ಎಂದು ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.