ನವದೆಹಲಿ: ಅಸ್ಸಾಂ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತ್ರಿಪುರ ಮತ್ತು ತಮಿಳುನಾಡು ರಾಜ್ಯಗಳ 8 ವಿಧಾನಸಭಾ ಮತ್ತು 4 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆ ನಡೆಯಲಿದೆ.
ಕೇಂದ್ರ ಸರ್ಕಾರದ ರೂ.500 ಮತ್ತು ರೂ.1000 ನೋಟುಗಳ ನಿಷೇಧದ ಮಹತ್ವದ ನಿರ್ಧಾರದಿಂದ ಬಿಜೆಪಿಗೆ ಈ ಚುನಾವಣೆ ದೊಡ್ಡ ಅಗ್ನಿಪರೀಕ್ಷೆಯಾಗಿರಲಿದೆ ಎಂದು ಊಹಿಸಲಾಗಿದೆ. ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆಗಳ ಮತದಾನ ಬೆಳಗ್ಗೆ ಆರಂಭಗೊಂಡಿದ್ದು, ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂನ ಲಖಿಂಪುರ್ ಲೋಕಸಭಾ ಕ್ಷೇತ್ರ ಮತ್ತು ಬೈಥಲಾನ್ಸೋ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ. ಲಖಿಂಪುರ್ನಿಂದ ಅಮಿಯಾ ಕುಮಾರ್ ಹಂಡಿಕ್ (ಕಾಂಗ್ರೆಸ್), ಪ್ರಧಾನ್ ಬರುಹಾ (ಬಿಜೆಪಿ), ಡಾ. ಹೇಮಾ ಹರಿ ಪ್ರಸನ್ನ ಪೆಗು (ಕಾಂಗ್ರೆಸ್), ಹೆಮಕಂಠ ಮಿರಿ (ಎಸ್ಯುಸಿಐ ಕಮ್ಯೂನಿಸ್ಟ್) ಹಾಗೂ ದಿಲೀಪ್ ಮೋರನ್ (ಸ್ವತಂತ್ರ) ೫ ಮಂದಿ ಅಭ್ಯರ್ಥಿಗಳಾಗಿದ್ದಾರೆ.
ಬೈಥಲಾನ್ಸೋ (ಎಸ್ಟಿ) ಕ್ಷೇತ್ರದಿಂದ ಬಿಜೆಪಿಯ ಡಾ. ಮಾನ್ಸಿಂಗ್ ರೋಗ್ಪಿ, ಕಾಂಗ್ರೆಸ್ನ ರೂಪೊನ್ಸಿಂಗ್ ರೋನ್ಘಂಗ್, ರಾಜನ್ ತೈಮುಂಗ್ (ಸ್ವತಂತ್ರ) ಸೇರಿದಂತೆ ಒಟ್ಟು ೨೦ ಮಂದಿ ಸ್ಪರ್ಧಿಗಳು ಚುನಾವಣೆಗೆ ನಿಂತಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಮತ್ತು ತಾಮ್ಲುಕ್ ಲೋಕಸಭಾ ಕ್ಷೇತ್ರಗಳಲ್ಲಿ ಹಾಗೂ ಮೋನ್ಟೇಸ್ವರ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.
ಮಧ್ಯಪ್ರದೇಶದ ಶಹಡೋಲ್ ಲೋಕಸಬ ಕ್ಷೇತ್ರ ಹಾಗೂ ನೇಪಾನಗರ್ ವಿಧಾನಸಭಾ ಕ್ಷೇತ್ರಗಳು, ತಮಿಳುನಾಡಿನ ತಂಜಾವೂರ್, ಅರವಕ್ಕುರಿಚಿ ಲೋಕಸಭಾ ಕ್ಷೇತ್ರ ಹಾಗೂ ಥಿರುಪರಕ್ಕುಂಡ್ರಮ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ತ್ರಿಪುರದ 2 ವಿಧಾನಸಭಾ ಕ್ಷೇತ್ರಗಳಾದ ಬರ್ಜಾಳ ಮತ್ತು ಖೋವೈ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.