ಸೂರತ್: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ಹಳೆ ನೋಟು ನಿಷೇಧದ ಕ್ರಮವನ್ನು ವಿರೋಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ. ಈ ಬಗ್ಗೆ ಗುಜರಾತ್ನ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ಕೇಜ್ರಿವಾಲ್ಗೆ ಬಹಿರಂಗ ಪತ್ರ ಬರೆದಿದ್ದಾರೆ.
ಕಪ್ಪು ಹಣ ನಿಗ್ರಹಿಸಲು ರೂ. 2000 ಮುಖಬೆಲೆಯ ನೋಟಿನ ಮಹತ್ವದ ಕುರಿತು ಮೆಹುಲ್ ಶಾ ಅವರ ಬಹಿರಂಗ ಪತ್ರ ಈಗ ವೈರಲ್ ಆಗಿದೆ. ಈ ಪತ್ರದಲ್ಲಿ ಅವರು 1000 ರೂ. ಬದಲು 2000 ರೂ. ಮುಖಬೆಲೆಯ ನೋಟು ಬಿಡುಗಡೆ ಹಿಂದಿನ ಸಂಭವನೀಯ ತರ್ಕವನ್ನು ವಿವರಿಸಿದ್ದಾರೆ ಎಂದು ಇಂಡಿಯಾ ಅರಿಸಿಂಗ್ ವೆಬ್ಸೈಟ್ ವರದಿ ಮಾಡಿದೆ.
ನೀವು ಹಳೆಯ ರೂ.500 ಮತ್ತು ರೂ.1000 ನೋಟುಗಳ ಚಲಾವಣೆ ರದ್ದುಗೊಳಿಸುವ ಅಧಿಸೂಚನೆಗೆ ಬೆಂಬಲಿಸುವ ಬಗ್ಗೆ ನಿರೀಕ್ಷೆ ಹೊಂದಿದ್ದೆ. ನನಗೆ ನಿಮ್ಮ ಪ್ರತಿಕ್ರಿಯೆ ಬಗ್ಗೆ ಬಹಳ ಕುತೂಹಲವಿತ್ತು. ಏಕೆಂದರೆ ರಾಜಕೀಯಕ್ಕೆ ನಿಮ್ಮ ಪ್ರವೇಶ ಕಪ್ಪು ಹಣ ಮತ್ತು ಭಷ್ಟಾಚಾರದ ವಿರುದ್ಧ ಯಾವುದೇ ಸಣ್ಣ ನಡೆಯನ್ನೂ ಕೂಡ ಬೆಂಬಲಿಸುವುದು ಆಗಿತ್ತು. ವಾಸ್ತವವಾಗಿ ಇದೊಂದು ಅತ್ಯಂತ ದಿಟ್ಟ ಹೆಜ್ಜೆಯಾಗಿದೆ..!
ನಿಮ್ಮ ವೀಡಿಯೋ ಬಿಡುಗಡೆ ನೋಡಿದ ನಂತರ ಆಪ್ ಪಕ್ಷದ ಮೇಲೆ ಜನಸಾಮಾನ್ಯರ ನಿರೀಕ್ಷೆಗಳು ನುಚ್ಚುನೂರಾದಂತೆ ಕಾಣಿಸುತ್ತದೆ. ನಿಮ್ಮಂತಹ ಘನತೆ ಮತ್ತು ನಿಲುವು ಹೊಂದಿದ ವ್ಯಕ್ತಿ ಯಾವುದೇ ಆತಂಕವಿಲ್ಲದೇ ಇಂತಹ ಮೆಗಾ ಸ್ವಚ್ಛತಾ ಅಭಿಯಾನಕ್ಕೆ ಸಕಾರಾತ್ಮಕವಾಗಿ ಬೆಂಬಲ ನೀಡುವುದನ್ನು ನಾನು ಭಾವಿಸುತ್ತೇನೆ.
ವಿವಿಧ ತಜ್ಞರ ಸಂಪರ್ಕ ಮತ್ತು ಸಲಹೆಯ ಪಡೆದರೂ ನಿಮಗೆ ರೂ.1000 ಮುಖಬೆಲೆಯ ನೋಟಿನ ಬದಲು ರೂ. 2000 ಮುಖಬೆಲೆಯ ನೋಟು ಜಾರಿಗೆ ತಂದಿರುವ ಹಿನ್ನೆಲೆ ಅರಿಯಲು ಸಾಧ್ಯವಾಗಿಲ್ಲ ಎಂದು ಅನಿಸುತ್ತಿದೆ.
1000 ರೂ. ಮುಖಬೆಲೆಯ ಹೊಸ ನೋಟು ಜಾರಿಗೆ ತಂದಿದ್ದರೆ 1,00,000 ರೂ. ಕಪ್ಪು ಹಣ ಹೊಂದಿದ್ದ ಓರ್ವ ವ್ಯಕ್ತಿ ಮೊದಲ ದಿನ ಬ್ಯಾಂಕಿನಲ್ಲಿ ಹಳೆಯ 1000 ರೂ.ಯ 10 ನೋಟುಗಳನ್ನು ಅಂದರೆ 10 ಸಾವಿರ ರೂ.ನ್ನು ತನ್ನ ಖಾತೆಗೆ ಜಮಾ ಮಾಡುತ್ತಿದ್ದ. ಅಂದು ಸಂಜೆ ಹೊಸ ರೂ.1000 ಮುಖಬೆಲೆಯ 10,000 ರೂ. ಹಣವನ್ನು ಹಿಂಪಡೆಯುತ್ತಿದ್ದ.
ಮರುದಿನ ಮತ್ತೆ ಹಳೆಯ ರೂ.1000 ಮುಖಬೆಲೆಯ ನೋಟುಗಳನ್ನು ಜಮಾ ಮಾಡಿ ಹೊಸ ನೋಟು ಪಡೆಯುತ್ತಿದ್ದ. ಇದು ಮುಂದಿನ 10 ದಿನ ಮುಂದುವರೆದರೆ ಆತ ತನ್ನ ಕಪ್ಪು ಹಣವನ್ನು ಸುರಕ್ಷಿತವಾಗಿ ತನ್ನ ಬಳಿ ಇರಿಸುತ್ತಾನೆ. ಆದಾಯ ತೆರಿಗೆ ಇಲಾಖೆಗೆ ತನ್ನ ಬಳಿ ಕೇವಲ 10,000 ರೂ. ಕಪ್ಪು ಹಣ ಇರುವುದಾಗಿ ದಾಖಲೆ ನೀಡುತ್ತಿದ್ದ ಎಂದು ಮೆಹುಲ್ ಶಾ ಪತ್ರದಲ್ಲಿ ವಿವರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.