ಟೋಕಿಯೋ: ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರೂ.500 ಮತ್ತು 1000 ಮುಖಬೆಲೆಯ ನೋಟುಗಳ ರದ್ದತಿ ಕಪ್ಪು ಹಣ ಪೂರೈಕೆದಾರರ ವಿರುದ್ಧದ ಅತೀ ದೊಡ್ಡ ಸ್ವಚ್ಛತಾ ಅಭಿಯಾನವಾಗಿದೆ ಎಂದು ಶನಿವಾರ ಹೇಳಿದ್ದಾರೆ.
ಜಪಾನ್ನ ಭಾರತೀಯ ಸಮುದಾಯವನ್ನು ಇದ್ದೇಶಿಸಿ ಮಾತನಾಡುತ್ತಿದ್ದ ಅವರು, 500 ಮತ್ತು 1000 ರೂ. ರದ್ದುಗೊಳಿಸಿದ್ದರಿಂದ ದೇಶದ ಜನತೆಗೆ ಉಂಟಾಗಿರುವ ಅನಾನುಕೂಲದ ಬಗ್ಗೆ ಅರಿವಿದೆ. ಆದರೆ ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಇದು ಅಗತ್ಯ ಎಂದು ಹೇಳಿದ್ದಾರೆ.
ನೋಟುಗಳ ರದ್ದತಿಗೆ ಬೆಂಬಲ ಸೂಚಿಸಿದ ಪ್ರತೀ ಭಾರತೀಯನಿಗೂ ನಾನು ವಂದಿಸುತ್ತೇನೆ. ಹಲವಾರು ಕುಟುಂಬಗಳು ಮದುವೆ, ಅನಾರೋಗ್ಯ ಮತ್ತಿತರ ಅನಾನುಕೂಲತೆಯನ್ನು ಎದುರಿಸುವಂತಾಗಿದೆ. ನನಗೆ ಇದರ ಅರಿವಿದೆ. ನಿಯಮಗಳು ಎಲ್ಲರಿಗೂ ಒಂದೇ ಆಗಿರಲಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ಯಾವುದೇ ತರಾತುರಿಯಲ್ಲಿ ನೋಟುಗಳನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿಲ್ಲ. ನೋಟುಗಳ ರದ್ದತಿಗೂ ಮುನ್ನ ಜನರು ತಮ್ಮ ಆದಾಯ ವಿವರಣೆ ತೋರಿಸಲು ಸೆಪ್ಟೆಂಬರ್ ತಿಂಗಳ ವರೆಗೆ ಸಮಯಾವಕಾಶ ನೀಡಲಾಗಿತ್ತು. ಹಲವು ಗಂಟೆಗಳ ಚರ್ಚೆ ಬಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.