ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಕಾವೇರಿ ನೀರು ಬಿಕ್ಕಟ್ಟು ಸೇರಿದಂತೆ ಅಂತರ್-ರಾಜ್ಯ ನದಿ ನೀರು ನಿರ್ವಹಣೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ಮಸೂದೆ ೨೦೧೬ರ ಅಂತಿಮ ಕರಡನ್ನು ಬಿಡುಗಡೆ ಮಾಡಿದೆ.
ಇದು ಜಲಾಯನ ಪ್ರದೇಶಗಳ ನದಿ ನೀರು ನಿರ್ವಹಣೆ, ರಾಜ್ಯಗಳಿಗೆ ಬೇಕಾದ ಜಲ ಮಾಪನ ಮತ್ತು ನೀರಿನ ಪ್ರಮಾಣ ನಿಗದಿ, ಅಂತರ್ ರಾಜ್ಯ ವಿವಾದ ಬಿಕ್ಕಟ್ಟು ಇತ್ಯರ್ಥಕ್ಕೆ ಸಹಕಾರಿಯಾಗಲಿದೆ ಎನ್ನಲಾಗಿದೆ.
ಅಂತರ್ ರಾಜ್ಯ ಜಲಾಯನಗಳ ನದಿಗಳು ಮತ್ಯು ಕಣಿವೆಗಳ ‘ಗರಿಷ್ಟ ಮತ್ತು ಸುಸ್ಥಿರ’ ಅಭಿವೃದ್ಧಿ ಖಚಿತಪಡಿಸಿಕೊಳ್ಳಲು ನದಿ ಜಲಾಯನ ಪ್ರಾಧಿಕಾರ ಸ್ಥಾಪಿಸಲು ಈ ಕರಡು ಮಸೂದೆ ಒತ್ತು ನೀಡಿದೆ. ಈ ಮಸೂದೆ ಈ ಮಾಸಾಂತ್ಯದೊಳಗೆ ಮಸೂದೆ ಕುರಿತು ಸಚಿವ ಸಂಪುಟದಲ್ಲಿ ಚರ್ಚಿ ನಡೆಯಲಿದ್ದು, ಮುಂದಿನ ಸಂಸತ್ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.
ನದಿ ನೀರು ಯಾವುದೇ ರಾಜ್ಯಕ್ಕೆ ಸೇರಿದ್ದಲ್ಲ. ಬದಲಾಗಿ ಅದು ದೇಶದ ಸ್ವತ್ತು. ನದಿ ನೀರು ಹರಿಯುವ ರಾಜ್ಯಗಳು ಆ ನೀರನ್ನು ಬಳಸುವ ಹಕ್ಕು ಪಡೆದಿವೆ. ರಾಜ್ಯಗಳು ಮೂಲ ನದಿಗಳ ಜಲ ಸಂರಕ್ಷಣೆ ಮಾಡಬೇಕು. ಪ್ರತಿ ನಾಗರಿಕರು ನಿತ್ಯತದ ಜೀವನಕ್ಕೆ ಬೇಕಾದಷ್ಟು ನೀರನ್ನು ಬಳಸುವ ಹಕ್ಕು ಹೊಂದಿದ್ದಾರೆ. ರಾಜ್ಯಗಳ ನದಿಪಾತ್ರದ ವ್ಯಕ್ತಿಗಳು ಈ ಹಕ್ಕಿನಿಂದ ವಂಚಿತರಾಗಬಾರದು. ನೀರು ಹಂಚಿಕೆಗೆ ಲಿಂಗ, ಜಾತಿ, ಧರ್ಮ ತಾರತಮ್ಯ ನಡೆಸಬಾರದು ಎಂದು ಮಸೂದೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.