ನವದೆಹಲಿ: ಭಾರತ ಮತ್ತು ಪಾಕಿಸ್ಥಾನದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ನಡುವೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸ್ನೇಹ ಸೂಚಕ ಟ್ವೀಟ್ ಪಾಕಿಸ್ಥಾನದ ಯುವ ನಿಯೋಗದ ಹೃದಯ ಗೆದ್ದಿದೆ.
ಹೆಣ್ಣು ಮಕ್ಕಳಿಗೆ ಯಾವುದೇ ಸೀಮೆ ಇರುವುದಿಲ್ಲ. ಅವರು ಎಲ್ಲರಿಗೂ ಸೇರಿದವರು ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
19 ಯುವತಿಯರ ತಂಡ ಸೆಪ್ಟೆಂಬರ್ 27ರಂದು ಚಂಡೀಗಢದಲ್ಲಿ ನಡೆದ ‘ಗ್ಲೋಬಲ್ ಯೂತ್ ಪೀಸ್’ ಕೇರ್ಯಕ್ರಮದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿದ್ದರು. ಆದರೆ ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ಸೀಮಿತ ದಾಳಿ ಕಾರ್ಯಾಚರಣೆಯಿಂದಾಗಿ ಪಾಕ್ ಯುವತಿಯರ ತಂಡ ನಿಗದಿಯಂತೆ ಅಕ್ಟೋಬರ್ 4ರಂದು ಪಾಕಿಸ್ಥಾನಕ್ಕೆ ಮರಳುವ ಬಗ್ಗೆ ಅನಿಶ್ಚಿತತೆ ಕಂಡು ಬಂದಿದೆ.
ಪಾಕಿಸ್ಥಾನದ ‘ಪೀಸ್ ಫಾರ್ ಗರ್ಲ್ಸ್ ಗ್ರೂಪ್’ಗೆ ಅಧಿಕಾರಿಗಳು ಹೆಚ್ಚುವರಿ ಭದ್ರತೆ ಒದಸಿದರೂ ಯುವತಿಯರ ಪೋಷಕರು ತಕ್ಷಣ ತವರಿಗೆ ಮರಳುವಂತೆ ಒತ್ತಡ ಹೇರಿದ್ದಾರೆ.
ಅಕ್ಟೋಬರ್ 1ರಂದು ಭಾರತ-ಪಾಕಿಸ್ಥಾನ ಸ್ನೇಹ ಯೋಜನೆಯ ಶಾಂತಿ ವೇದಿಕೆ ‘ಅಘಾಜೆ ದೋಸ್ತಿ’ ಸಂಚಾಲಕಿ ಆಲಿಯಾ ಹರಿರ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ್ದು, ಸ್ವರಾಜ್ ಅವರು ತಂಡದ ಸುರಕ್ಷಿತ ವಾಪಸಾತಿ ಬಗ್ಗೆ ಭರವಸೆ ನೀಡಿದ್ದಾರೆ.
ಅಮೇರಿಕಾದ ಟ್ರಾಯ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಂಬಂಧಗಳ ವಿದ್ಯಾರ್ಥಿನಿ ಹಾಗೂ ಸ್ತ್ರೀಸಮಾನತಾವಾದಿ ಆಲಿಯಾ ಹರಿರ್ ಅವರು ಭಾರತೀಯರು ತಮ್ಮ ಅತಿಥಿಗಳನ್ನು ದೇವರಂತೆ ನೋಡಿಕೊಳ್ಳುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ಅವರು ಸಹಾಯ ಕೇಳಿದ ಪ್ರತಿಯೊಬ್ಬರನ್ನು ತಲುಪುವ ಮೂಲಕ ಟ್ವಿಟರ್ನಲ್ಲಿ ಮೆಚ್ಚುಗೆ ಮತ್ತು ಜನಪ್ರಿಯತೆ ಗಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.