ಕೊಟ್ಟಯಂ: ತಿರುವಳ್ಳ-ಚೆಂಗನ್ನೂರ್ ನಡುವೆ 9.6 ಕಿ.ಮೀ. ಡಬಲ್ ರೈಲು ಮಾರ್ಗ ಸೇರಿದಂತೆ 6 ಪ್ರಮುಖ ಯೋಜನೆಗಳಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಕೇರಳದಲ್ಲಿ ಬಿಡುಗಡೆ ಮಾಡಿದ್ದಾರೆ.
ರೈಲ್ವೆ ಸಚಿವಾಲಯ ಪಿಪಿಪಿ ಯೋಜನೆ ಮತ್ತು ರಾಜ್ಯ ಸರ್ಕಾರಗಳ ಜೊತೆ ಜಂಟಿ ಕಾರ್ಯಾಚರಣೆ ಮೂಲಕ ರೈಲ್ವೆ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿದೆ ಎಂದು ಸಚಿವ ಪ್ರಭು ತಿಳಿಸಿದ್ದಾರೆ.
ಪಾಲಕ್ಕಾಡ್, ತ್ರಿಶೂರ್, ಕೋಝಿಕೋಡ್, ತಿರುವನಂತಪುರಂಗಳಲ್ಲಿ ಮೂಲಸೌಕರ್ಯ ವ್ಯವಸ್ಥೆಯನ್ನು ಉದ್ಘಾಟಿಸಿದ ಅವರು, ಪಾಲಕ್ಕಾಡ್ ರೈಲು ನಿಲ್ಧಾಣದಲ್ಲಿ ನೂತನ ಪ್ಲಾಟ್ಫಾರ್ಮ್ ಬಿಡುಗಡೆ ಮತ್ತು ತ್ರಿಶೂರ್ ರೈಲು ನಿಲ್ದಾಣದಲ್ಲಿ ಸಾರ್ವಜನಿಕ ವೈ-ಫೈ ಸೇವೆಯನ್ನು ಉದ್ಘಾಟಿಸಿದರು.
ತ್ರಿಶೂರ್ ಮತ್ತು ತಿರುವನಂತಪುರಂ ರೈಲು ನಿಲ್ದಾಣಗಳಲ್ಲಿ ನೂತನ ಎಸ್ಕಲೇಟರ್ ಹಾಗೂ ಕೋಝಿಕೋಡ್ ರೈಲು ನಿಲ್ದಾಣದಲ್ಲಿ ಓವರ್ಬ್ರಿಡ್ಜ್ಗೆ ಶಂಕುಸ್ಥಾಪನೆ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.