ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕಾಶ್ಮೀರಿಗರನ್ನೂ ತಲುಪುವ ಪ್ರಯತ್ನ ಮಾಡಿದ್ದಾರೆ.
ಕಾಶ್ಮೀರದ ಸಮಸ್ಯೆಯನ್ನು ನೀಗಿಸಲು ಏಕತೆ ಮತ್ತು ಮಮತೆ ಅತಿ ಮುಖ್ಯವಾಗಿದೆ ಎಂದ ಅವರು, ಮುಗ್ಧ ಮಕ್ಕಳನ್ನು ಹಿಂಸೆಗೆ ದೂಡುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದರು.
ವಿವಿಧ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ನನಗೆ ಒಂದು ವಿಷಯವಂತೂ ಅರ್ಥವಾಯಿತು. ಅದೇನೆಂದರೆ ಕಾಶ್ಮೀರದಲ್ಲಿ ಏಕತೆ ಮತ್ತು ಮಮತೆ ಮೂಲಮಂತ್ರವಾಗಿರಬೇಕು ಎಂಬುದು ಎಂದಿದ್ದಾರೆ.
ಮಕ್ಕಳನ್ನು ಮುಂದಿಟ್ಟುಕೊಂಡು ಹಿಂಸೆಯನ್ನು ಉತ್ತೇಜಿಸುತ್ತಿರುವವರು ಒಂದಲ್ಲಾ ಒಂದು ದಿನ ತಮ್ಮ ಪಾಪಕೃತ್ಯಗಳಿಗೆ ಉತ್ತರವನ್ನು ನೀಡಬೇಕಾಗುತ್ತದೆ. ಕಾಶ್ಮೀರದ ಹಿಂಸೆಯಲ್ಲಿ ಯಾರೇ ಮೃತರಾದರೂ ಅದು ಈ ದೇಶದ 120 ಕೋಟಿ ಜನರಿಗಾಗುವ ನಷ್ಟ ಎಂದರು.
ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಭೇಟಿಯಾದ ಬಳಿಕ ಮೋದಿ ಈ ಅಭಿಪ್ರಾಯವನ್ನು ರೇಡಿಯೋದಲ್ಲಿ ವ್ಯಕ್ತಪಡಿಸಿದ್ದಾರೆ.
ನಮ್ಮದು ದೊಡ್ಡ ದೇಶ, ವೈವಿಧ್ಯತೆಗಳ ತಾಣ. ಇದನ್ನು ಏಕತೆಯಿಂದ ಇಟ್ಟುಕೊಳ್ಳಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.