ಕೋಲ್ಕತಾ: ಮದರ್ ತೆರೇಸಾರ ಸಂತ ಸಮಾರಂಭ (sainthood)ವನ್ನು ಗುರುತಿಸಲು ಸೆಪ್ಟೆಂಬರ್ ೪ರಂದು ವಾಟಿಕನ್ನಲ್ಲಿ ಅಂಚೆ ಚೀಟಿ, ನಾಣ್ಯ, ಸ್ಮಾರಕ ಬಿಡುಗಡೆ ಮಾಡಲಾಗುತ್ತಿದೆ.
ಭಾರತೀಯ ಅಂಚೆ ಶುದ್ಧ ರೇಷ್ಮೆಯಿಂದ ತಯಾರಿಸಿದ ಅಂಚೆ ಚೀಟಿ ಮತ್ತು ನಾಣ್ಯಗಳ ಕವರ್ನ್ನು ಸೆಪ್ಟೆಂಬರ್ 2ರಂದು ಬಿಡುಗಡೆ ಮಾಡಲಿದೆ. ಭಾರತದ ಸರ್ಕಾರ 2010ರಲ್ಲಿ ತೆರೇಸಾರ ಜನ್ಮ ಶತಮಾನೋತ್ಸವದ ಅಂಗವಾಗಿ ಬಿಡುಗಡೆ ಮಾಡಿದ್ದ 5 ರೂಪಾಯಿ ನಾಣ್ಯದ ಮುದ್ರೆನ್ನು ಅಂಚೆ ಕವರ್ ಮೇಲೆ ಮುದ್ರಿಸಲಾಗುವುದು. ಈ ವಿಶಿಷ್ಟ ನಾಣ್ಯ ಮತ್ತು ಸ್ಟ್ಯಾಂಪ್ನ್ನು ಸಂಯೋಜಿಸಲಿದೆ ಎಂದು ಸ್ಟ್ಯಾಂಪ್ ವಿನ್ಯಾಸಗಾರ ಅಲೋಕ್ ಗೋಯಲ್ ಹೇಳಿದ್ದಾರೆ.
ತೆರೇಸಾರ ಜನನ ಸ್ಥಾನವಾದ ರಿಪಬ್ಲಿಕ್ ಆಫ್ ಮ್ಯಾಸಿಡೋನಿಯ 100 ದೀನಾರ್ ಮುಖಬೆಲೆಯುಳ್ಳ ತೆರೇಸಾರ ವಿಶೇಷ ಚಿನ್ನ ಲೇಪಿತ ನಾಣ್ಯವನ್ನು ಅಕ್ಟೋಬರ್ನಲ್ಲಿ ಬಿಡುಗಡೆ iಡುವುದಾಗಿ ಘೋಷಿಸಿದೆ.
5000 ನಾಣ್ಯಗಳನ್ನು ಮುದ್ರಿಸಲಾಗುತ್ತಿದ್ದು, 50 ನಾಣ್ಯಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ವಿಶೇಷ ಅಂಚೆಚೀಟಿ ಮತ್ತು ನಾಣ್ಯಗಳ ಅಂತಾರಾಷ್ಟ್ರೀಯ ವ್ಯಾಪಾರಿಯಾಗಿರುವ ಗೋಯಲ್ ಹೇಳಿದ್ದಾರೆ.
ನಾಣ್ಯದ ಮಧ್ಯಭಾಗದಲ್ಲಿ ತೆರೇಸಾರ ಪ್ರತಿಮೆ ಇರಲಿದೆ. ಇದು ಲ್ಯಾಟಿನ್ ಲಿಪಿ Sancta Teresia de Calcutta (Saint Teresa of Calcutta)ನ್ನು ಹೊಂದಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.