ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, 2010ನಡಿಯಲ್ಲಿ ನೋಂದಣಿ ಮಾಡಿರುವ ಎನ್ಜಿಓಗಳಿಗೆ ಹರಿದು ಬರುತ್ತಿರುವ ವಿದೇಶಿ ದೇಣಿಗೆ ಮತ್ತು ಅದರ ಬಳಕೆಗಳ ಬಗ್ಗೆ ಕಣ್ಣಿಡುವ ಸಲುವಾಗಿ ’ಆನ್ಲೈನ್ ಅನಾಲಿಟಿಕಲ್ ಟೂಲ್’ನ್ನು ಅನಾವರಣಗೊಳಿಸಲಾಗಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ದೆಹಲಿಯಲ್ಲಿ ಈ ‘ಆನ್ಲೈನ್ ಅನಾಲಿಕಲ್ ಟೂಲ್’ಗೆ ಚಾಲನೆಯನ್ನು ನೀಡಿದರು.
ವೆಬ್ ಆಧಾರಿತ ಈ ಟೂಲ್, ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಅಧಿಕಾರಿಗಳಿಗೆ, ಪ್ರತಿನಿಧಿಗಳಿಗೆ ವಿದೇಶಿ ಅನುದಾನ ಮತ್ತು ಅದರ ನೈಜ ಬಳಕೆಗಳ ಬಗ್ಗೆ ಪರಿಶೀಲನೆ ನಡೆಸಲು ಅನುವು ಮಾಡಿಕೊಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.