ನವದೆಹಲಿ: ದೇವ ಮಾನವರು ಮತ್ತು ಧರ್ಮ ರಾಜಕೀಯದಿಂದ ದೂರ ಇರಬೇಕು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೋನ್ಸ್ ಹೇಳಿದ್ದಾರೆ.
ದೆಹಲಿಯ ಆರ್ಚ್ಬಿಷಪ್ ಅವರು ಚರ್ಚ್ಗಳಿಗೆ ಬರೆದ ಪತ್ರದ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಅವರು, ‘ನಾನು ಕಾರ್ಡಿನಲ್ ಗ್ರಾಸಿಯಾಸ್ ಮತ್ತು ಉನ್ನತ ಬಿಷಪ್ಗಳೊಂದಿಗೆ ಮಾತನಾಡಿದ್ದೇನೆ, ಪ್ರಧಾನಿಯನ್ನು ಅವರು ಬಲವಾಗಿ ಸಮರ್ಥಿಸುತ್ತಾರೆ, ಪ್ರಧಾನಿಯನ್ನು ಇಷ್ಟಪಡದ ಧ್ವನಿಗಳು ಇದೆ. ದೇವ ಮಾನವರು ಮತ್ತು ಧರ್ಮ ರಾಜಕೀಯದಿಂದ ದೂರವಿರಬೇಕು’ ಎಂದಿದ್ದಾರೆ.
‘ಕರಾಳ ಚಿತ್ರ ಬರೆಯುವುದು ಅವರ ವ್ಯವಹಾರವಲ್ಲ, ಅವರು ಬರೆದ ಪತ್ರ ಓದಿದಾಗ ರೆಫರೆನ್ಸ್ ಸರಿಯಿಲ್ಲ ಎಂದು ತಿಳಿದು ಬಂತು, ಕೊರತೆ ಹೊಂದಲು ಚರ್ಚ್ಗೆ ಕಾರಣವಿಲ್ಲ, ಪ್ರಧಾನಿಯವರು ಕ್ರಿಶ್ಚಿಯನ್ ಸಮುದಾಯದ ಸಹಾಯಕ್ಕೆ ತುರ್ತಾಗಿ ಧಾವಿಸಿದ್ದಾರೆ’ ಎಂದರು.
‘2019ರ ಚುನಾವಣೆಯ ಹಿನ್ನಲೆಯಲ್ಲಿ ಸರ್ಕಾರ ಬದಲಾವಣೆಗೆ ಪ್ರಾರ್ಥಿಸಿ, ದೇಶದಲ್ಲಿ ಜಾತ್ಯಾತೀತತೆ ಅಪಾಯದಲ್ಲಿದೆ’ ಎಂದು ಆಚ್ಬಿಷಪ್ ಪತ್ರ ಬರೆದಿದ್ದರು. ಇದು ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.