ನವದೆಹಲಿ: ತಾಜ್ಮಹಲ್ನ ಮಾಲಿಕತ್ವವನ್ನು ಪಡೆದುಕೊಳ್ಳುವ ಸಲುವಾಗಿ ಉತ್ತರಪ್ರದೇಶ ಸುನ್ನಿ ವಕ್ಫ್ ಮಂಡಳಿ ಭಾರತೀಯ ಪುರಾತತ್ವ ಇಲಾಖೆಯೊಂದಿಗೆ ಕಾನೂನು ಸಮರದಲ್ಲಿ ತೊಡಗಿದೆ. ತಾಜ್ ಮಹಲ್ ಕಟ್ಟಿದ ಶಹಜಹಾನ್ ಅದರ ಮಾಲಿಕತ್ವವನ್ನು ಸುನ್ನಿಗಳಿಗೆ ನೀಡಿದ್ದ ಎಂಬುದು ಇವರ ವಾದ.
ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ, ಶಹಜಹಾನ್ ಮಾಲಿಕತ್ವ ನೀಡಿದ್ದ ಬಗೆಗಿನ ಆತನ ಸಹಿವುಳ್ಳ ದಾಖಲೆ ಪತ್ರಗಳನ್ನು ಸಲ್ಲಿಕೆ ಮಾಡುವಂತೆ ಸುನ್ನಿ ವಕ್ಫ್ ಮಂಡಳಿಗೆ ಆದೇಶಿಸಿದೆ. ಒಮದು ವಾರಗಳೊಳಗೆ ದಾಖಲೆ ಪತ್ರ ಸಲ್ಲಿಕೆಯಾಗ ಬೇಕು ಎಂದು ಸೂಚಿಸಿದೆ.
1666ರಲ್ಲಿ ಶಹಜಹಾನ್ ಮೃತಪಟ್ಟಿದ್ದಾನೆ. ಈತ ತನ್ನ ಪತ್ನಿಯ ನೆನಪಿಗೆ ತಾಜ್ ಮಹಲ್ ಕಟ್ಟಿದ 18 ವರ್ಷಗಳ ತರರುವಾಯ ಮೃತನಾದ ಎಂದು ಹೇಳಲಾಗುತ್ತದೆ. ಆದರೆ 2010ರಲ್ಲಿ ಸುನ್ನಿ ಮಂಡಳಿ ಸುಪ್ರೀಂಗೆ ಅರ್ಜಿ ಹಾಕಿ ತಾಜ್ ಮಹಲ್ನ್ನು ನಮಗೆ ನೀಡಿ, ಶಹಜಹಾನ್ ಅದನ್ನು ನಮಗೆ ನೀಡಿದ್ದ ಎಂದು ವಾದಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.