ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇಂದು ನವದೆಹಲಿಯಲ್ಲಿ ನಡೆದ ಸರ್ವಧರ್ಮ ಸಮನ್ವಯ ಸಮಾವೇಶದಲ್ಲಿ ಉಗ್ರವಾದವನ್ನು ಎದುರಿಸುವ ಕುರಿತು ಭಾಷಣ ಮಾಡಿದರು. ಈ ವೇಳೆ ಅವರ ಭಯೋತ್ಪಾದನೆ ವಿರುದ್ಧದ ಹೋರಾಟದ ಮಹತ್ವವನ್ನು ಒತ್ತಿ ಹೇಳಿದರು.
ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್ನಲ್ಲಿ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಸರ್ವಧರ್ಮ ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಉಲೇಮಾಗಳ ಪಾತ್ರದ ಕುರಿತು ಮಾತನಾಡಿದ ಅಜಿತ್ ದೋವಲ್, “ಇಂಡೋನೇಷ್ಯಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಿಂದ ಆದ ಜೀವನಷ್ಟ ಮತ್ತು ಆಸ್ತಿ ಹಾನಿಯಿಂದ ನಾವೆಲ್ಲರೂ ಎಷ್ಟು ದುಃಖಿತರಾಗಿದ್ದೇವೆ ಎಂದು ಹೇಳಲು ಬಯಸುತ್ತೇನೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ನಮ್ಮ ಆಳವಾದ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಈ ದುಃಖದ ಸಮಯದಲ್ಲಿ ಭಾರತವು ಇಂಡೋನೇಷ್ಯಾದೊಂದಿಗೆ ನಿಂತಿದೆ” ಎಂದರು.
ದೋವಲ್ ಅವರು ಇಂಡೋನೇಷ್ಯಾದ ಸಮನ್ವಯ ಸಚಿವ ಮೊಹಮ್ಮದ್ ಮಹ್ಫುದ್ ನೇತೃತ್ವದ ಇಂಡೋನೇಷ್ಯಾದ ಉಲೇಮಾಗಳು ಮತ್ತು ಇತರ ಧಾರ್ಮಿಕ ಮುಖಂಡರ ನಿಯೋಗದೊಂದಿಗೆ ಧಾರ್ಮಿಕ ಸಾಮರಸ್ಯದ ಕುರಿತು ಮಾತುಕತೆ ನಡೆಸಿದರು.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತ ಮತ್ತು ಇಂಡೋನೇಷ್ಯಾ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಜಾಪ್ರಭುತ್ವ ಎಂದು ದೋವಲ್ ಪ್ರತಿಪಾದಿಸಿದರು. ಇಂಡೋನೇಷ್ಯಾದ ದಡವನ್ನು ಆವರಿಸಿರುವ ನೀರು ನಮ್ಮ ತೀರವನ್ನು ಕೂಡ ಆವರಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. “ನಾವು ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದ್ದೇವೆ ಮತ್ತು ವ್ಯಾಪಕವಾದ ಜನರರಿಂದ ಜನರ ಸಂಬಂಧಗಳನ್ನು ಹೊಂದಿದ್ದೇವೆ. ಪ್ರವಾಸೋದ್ಯಮವು ನಮ್ಮ 2 ದೇಶಗಳ ನಡುವಿನ ಸಹಕಾರದ ಪ್ರಮುಖ ಸೇತುವೆಯಾಗಿದೆ” ಎಂದು ಅವರು ಹೇಳಿದರು.
#BREAKING | NSA Ajit Doval delivers address on countering extremism. Stresses on the importance of fighting terrorism as he talks about close nature of India-Indonesia ties. Tune in to watch here – https://t.co/GAtGCw2GdU pic.twitter.com/CifN2cRwFS
— Republic (@republic) November 29, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.