ನವದೆಹಲಿ: ಸಂಸತ್ತಿನಲ್ಲಿ ಕೆಲವೊಂದು ಅಸಮಂಜಸವಾದ ಪದಬಳಕೆಯನ್ನು ನಿಷೇಧಿಸಲಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಬಳಸಬಾರದ ಅಸಂಸದೀಯ ಪದಗಳ ಪಟ್ಟಿಯನ್ನೊಳಗೊಂಡ ಹೊಸ ಕೈಪಿಡಿಯೊಂದನ್ನು ಲೋಕಸಭೆಯ ಕಾರ್ಯದರ್ಶಿ ಬಿಡುಗಡೆ ಮಾಡಿದ್ದಾರೆ.
‘ಜುಮ್ಲಾಜೀವಿ’, ‘ಬಾಲಬುದ್ಧಿ’, ಅರಾಜಕತಾವಾದಿ (anarchist), ಶಕುನಿ (Shakuni), ಸರ್ವಾಧಿಕಾರಿ (dictatorial), ಜೈಚಂದ್ (Jaichand), ವಿನಾಶ್ ಪುರುಷ್ (vinash purush), ಖಲಿಸ್ತಾನಿ (Khalistani), ರಕ್ತದಿಂದ ಕೃಷಿ (khoon se kheti) ‘ಕೋವಿಡ್ ಸ್ಪ್ರೆಡರ್’ ಮತ್ತು ‘ಸ್ನೂಪ್ ಗೇಟ್’ ‘ನಾಚಿಕೆಗೇಡು’ (ashamed), ‘ದುರುಪಯೋಗ’ (abused), ‘ದ್ರೋಹ ಬಗೆದ’ (betrayed), ‘ಭ್ರಷ್ಟ’ (corrupt), ‘ನಾಟಕ’ (drama), ‘ಬೂಟಾಟಿಕೆ’ (hypocrisy) ಮತ್ತು ‘ಅಸಮರ್ಥ’ (incompetent), ಡಬಲ್ ರೋಲ್ (dohra charitra), ಕೆಲಸಕ್ಕೆ ಬಾರದವ (nikamma), ನಾಟಕ (nautanki), ತಮಟೆ ಬಾರಿಸುವುದು (dhindora peetna) ಮತ್ತು ಕಿವುಡ ಸರ್ಕಾರ (behri sarkar) ಇವು ಇನ್ನು ಮುಂದೆ ಅಸಂಸದೀಯ ಪದಗಳಾಗಿವೆ.
ಜುಲೈ 18 ರಂದು ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಹೊಸ ಅಸಂಸದೀಯ ಪದಗಳ ಕೈಪಿಡಿ ಪ್ರಕಟಿಸಲಾಗಿದೆ.
ಆದರೆ ಸರ್ಕಾರದ ಈ ಕ್ರಮವನ್ನು ಪ್ರತಿಪಕ್ಷಗಳು ತೀವ್ರವಾಗ ವಿರೋಧಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.