ನವದೆಹಲಿ: ಭಾರತದ ಹೆಮ್ಮೆಯ ವಾಯುಸೇನೆ ಇಂದು ತನ್ನ 89ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಕಳೆದ ಎರಡು ದಶಕಗಳಿಂದ ವಾಯುಸೇನೆ ತಾಂತ್ರಿಕವಾಗಿ ಬಹಳಷ್ಟು ಅಭಿವೃದ್ಧಿಯನ್ನು ಕಂಡಿದ್ದು, ರಾಷ್ಟ್ರಕ್ಕೆ ಎದುರಾದ ಯಾವುದೇ ಬೆದರಿಕೆಯನ್ನು ಅತ್ಯಂತ ಸಮರ್ಥವಾಗಿ ತಡೆಯುವಲ್ಲಿ ಸಶಕ್ತವಾಗಿದೆ.
ರಾಷ್ಟ್ರಕ್ಕೆ ಬಾಹ್ಯ ಶತ್ರುಗಳಿಂದ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸುವುದು ಮಾತ್ರವಲ್ಲದೆ ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಜನರ ರಕ್ಷಣೆಯಲ್ಲೂ ವಾಯುಸೇನೆ ಮುಂಚೂಣಿಯಲ್ಲಿದೆ.
ವಾಯುಸೇನೆ ದಿನವನ್ನು ಆಚರಿಸುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಗಾಜಿಯಾಬಾದಿನ ಹಿಂಡನ್ ವಾಯುಸೇನೆ ನೆಲೆಯಲ್ಲಿ ಸಂಪ್ರದಾಯದಂತೆ ವಿವಿಧ ಯುದ್ಧವಿಮಾನಗಳ ಪರೇಡ್ ನಡೆಯಲಿದೆ.
ವಾಯುಸೇನೆ ಮುಖ್ಯಸ್ಥ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ಪರೇಡ್ ವೀಕ್ಷಣೆ ಮಾಡಲಿದ್ದಾರೆ. ವಿವಿಧ ಗಣ್ಯರು ಮತ್ತು ಮಾಜಿ ಯೋಧರುಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಏರ್ ಡಿಸ್ಪ್ಲೇಯು ಪ್ರಖ್ಯಾತ ಆಕಾಶ ಗಂಗಾ ತಂಡದ ಧ್ವಜ ಹೊತ್ತ ಆಕಾಶ ಡೈವರ್ಗಳು ಎಎನ್ -32 ವಿಮಾನಗಳಲ್ಲಿ ವರ್ಣರಂಜಿತವಾಗಿ ಚಿತ್ತಾರ ಮೂಡಿಸುವುದರೊಂದಿಗೆ ಆರಂಭವಾಗುತ್ತದೆ. ಫ್ಲೈಪಾಸ್ಟ್ನಲ್ಲಿ ಪಾರಂಪರಿಕ ವಿಮಾನಗಳು, ಆಧುನಿಕ ಸಾರಿಗೆ ವಿಮಾನಗಳು ಮತ್ತು ಮುಂಚೂಣಿಯ ಯುದ್ಧ ವಿಮಾನಗಳು ಸೇರಿವೆ. ಸಮಾರಂಭವು ಸ್ಪೆಲ್ಬೈಂಡಿಂಗ್ ಏರೋಬಾಟಿಕ್ ಪ್ರದರ್ಶನದೊಂದಿಗೆ ಮುಕ್ತಾಯಗೊಳ್ಳುತ್ತದೆ.
— Indian Air Force (@IAF_MCC) October 8, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.