ಶ್ರೀನಗರ: ಶ್ರೀನಗರದ ಕಾಶ್ಮೀರಿ ಪಂಡಿತ ಸಮುದಾಯದವರು ‘ವ್ಯೆತ್ ತ್ರುವಾ’ ಹಬ್ಬವನ್ನು ನದಿ ದೇವಿ ವಿತಸ್ತಾ ಜಯಂತಿಯಂದು ಆಚರಿಸಿದ್ದಾರೆ. ಇದನ್ನು ಸಾಮಾನ್ಯವಾಗಿ ಜೇಲಂ ಎಂದು ಕರೆಯುತ್ತಾರೆ.
ಪುರಾತನ ಕಾಶ್ಮೀರಿ ಗ್ರಂಥಗಳ ಪ್ರಕಾರ ‘ವ್ಯೆತ್ ತ್ರುವಾ’ ಕಣಿವೆಯಲ್ಲಿ ಜೇಲಂ ನದಿ ಉಗಮವಾದ ದಿನ.
ವಲಸೆಗೂ ಮೊದಲು, ಕಣಿವೆಯಲ್ಲಿರುವ ಪಂಡಿತರು ಈ ದಿನವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರು, ಈ ಸಂದರ್ಭದಲ್ಲಿ ಜೇಲಂ ನೀರಿನಲ್ಲಿ ಸಾಂಪ್ರದಾಯಿಕ ಮಣ್ಣಿನ ದೀಪಗಳನ್ನು ತೇಲಿಸಲಾಗುತ್ತಿತ್ತು. ವಲಸೆಯ ಬಳಿಕ ಈ ಆಚರಣೆ ನಿಂತುಹೋಯಿತು.
32 ವರ್ಷಗಳ ನಂತರ ಕಾಶ್ಮೀರದ ಈ ಹಳೆಯ ಸಂಸ್ಕೃತಿಯ ಪುನರುಜ್ಜೀವನವಾಗಿದೆ. ಸನಾತನ ಧರಂ ಶೀತಲ್ ನಾಥ ಆಶ್ರಮದ ಸಹಯೋಗದೊಂದಿಗೆ ಶಾಂತಿ ಮಾನಸ್ ಪ್ರತಿಷ್ಠಾನದ ಉಪಕ್ರಮವಾಗಿ ಇದನ್ನು ಆಚರಿಸಲಾಯಿತು.
“ಕಾಶ್ಮೀರದಲ್ಲಿ ಈ ಹಳೆಯ ಪದ್ಧತಿಗಳ ಪುನರುಜ್ಜೀವನವನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ. ಈ ಧಾರ್ಮಿಕ ಆಚರಣೆಯು ಮುಸ್ಲಿಮರು ಮತ್ತು ಸಿಖ್ಖರು ಸೇರಿದಂತೆ ಎಲ್ಲಾ ಸಮುದಾಯಗಳ ಸಹಾಯ ಮತ್ತು ಬೆಂಬಲದಿಂದ ಮಾತ್ರ ಸಾಧ್ಯ, ಇದು ಕಾಶ್ಮೀರದಲ್ಲಿ ಶಾಂತಿ, ಕೋಮು ಸೌಹಾರ್ದತೆ ಮತ್ತು ಸಹಜತೆಯ ಮರಳುವಿಕೆಯನ್ನು ತೋರಿಸುತ್ತದೆ” ಎಂದು ಶಾಂತಿ ಮಾನಸ್ ಪ್ರತಿಷ್ಠಾನದ ಅಂಜಲಿ ಕೌಲ್ ಹೇಳಿದರು.
ಹಳೆಯ ಶ್ರೀನಗರದ ಹಬಾ ಕಡಲ್ನಲ್ಲಿರುವ ಪುರ್ಶಿಯಾರ್ ಘಾಟ್ನಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಯಿತು.
ಹಳೆಯ ಶ್ರೀನಗರದ ಪ್ರಸಿದ್ಧ ದೇವಸ್ಥಾನಗಳಿಗೆ ಹೊಂದಿಕೊಂಡಿರುವ ಐದು ಘಾಟ್ಗಳನ್ನು ಸಂಜೆ ಬೆಳಗಿಸಲಾಯಿತು. ಮುಸ್ಸಂಜೆಯಲ್ಲಿ ಜೇಲಂ ನದಿಯಲ್ಲಿ ಸಾಗುವ ದೋಣಿಗಳಲ್ಲಿ ಕಲಾವಿದರು ಸಾಂಪ್ರದಾಯಿಕ ಸಂಗೀತವನ್ನು ನುಡಿಸುವುದರೊಂದಿಗೆ ಆಚರಣೆಗಳು ಪ್ರಾರಂಭವಾದವು.
ಪುರ್ಶಿಯಾರ್ ಘಾಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜಾ, ಆರತಿ ಮತ್ತು ನದಿಯಲ್ಲಿ ಮಣ್ಣಿನ ದೀಪಗಳನ್ನು ತೇಲಿ ಬಿಡಲಾಯಿತು. ಆಚರಣೆಗಳು ಎಲ್ಲಾ ಸಮುದಾಯಗಳ ಜನರನ್ನು ಒಳಗೊಂಡ ಸ್ಥಳೀಯರಿಂದ ಸಣ್ಣ ಮೆರವಣಿಗೆಯೊಂದಿಗೆ ಮುಕ್ತಾಯಗೊಂಡವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.