ನವದೆಹಲಿ: ಲಸಿಕೆ ಪಡೆದವರು ಕೋಡ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಒಳಗಾಗುವ ಸಂಭವನೀಯತೆ ಇದೆ, ಆದರೆ ಸಾಂಕ್ರಾಮಿಕ ಅವರ ಮೇಲೆ ಹೆಚ್ಚು ಗಂಭೀರ ಸಮಸ್ಯೆಯನ್ನು ಸೃಷ್ಟಿ ಬೀರುವುದಿಲ್ಲ ಎಂದು ದೆಹಲಿಯ ಆರ್ಎಂಎಲ್ ಆಸ್ಪತ್ರೆಯ ನಿರ್ದೇಶಕ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ರಾಣಾ ಅನಿಲ್ ಕೆಆರ್ ಸಿಂಗ್ ಅವರು ಹೇಳಿದ್ದಾರೆ.
ಈಗಾಗಲೇ ಲಸಿಕೆ ಹಾಕಿದವರಲ್ಲಿ ಕೆಲವರು ಮಾತ್ರ ಮತ್ತೆ ಕೋವಿಡ್ಗೆ ತುತ್ತಾಗಿದ್ದಾರೆ, ಆದರೆ ಅವರ ಮೇಲೆ ರೋಗದ ತೀವ್ರತೆಯು ತುಲನಾತ್ಮಕವಾಗಿ ಕಡಿಮೆ ಇದೆ ಎಂದಿದ್ದಾರೆ.
ಡಾ. ಸಿಂಗ್, “ನಾವು ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಹತ್ತಿಕ್ಕಲೇ ಬೇಕು. ಪ್ರಕರಣಗಳ ಉಲ್ಬಣಕ್ಕೆ ಪ್ರಮುಖ ಅಂಶವೆಂದರೆ ಲಾಕ್ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದಾಗಿನಿಂದ ಜನರು ಕೋವಿಡ್ ಸೂಕ್ತ ವರ್ತನೆಯನ್ನು ಪಾಲನೆ ಮಾಡದೇ ಇರುವುದು” ಎಂದು ಅವರು ಹೇಳಿದ್ದಾರೆ.
” ಲಸಿಕೆ ಹಾಕಿದವರಲ್ಲಿ ಕೆಲವರು ವೈರಸ್ಗೆ ತುತ್ತಾಗಬಹುದು ಆದರೆ ಲಸಿಕೆ ಪಡೆದವರಲ್ಲಿ ಕೊವಿಡ್ ಗಂಭೀರ ಸ್ವರೂಪ ಪಡೆದುಕೊಂಡ ಮತ್ತು ಮರಣ ಹೊಂದಿದ ಯಾವುದೇ ಪ್ರಕರಣವೂ ಇಲ್ಲ. ಲಸಿಕೆ ಹಾಕಿದ ಜನರು ಪಾಸಿಟಿವ್ ಅಗಿದ್ದರೂ, ಸೋಂಕು ಎಂದಿಗೂ ತೀವ್ರ ಸ್ವರೂಪವನ್ನು ಪಡೆಯುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್ -19 ವ್ಯಾಕ್ಸಿನೇಷನ್ ಮೂರನೇ ಹಂತ ಇಂದು ಪ್ರಾರಂಭವಾಗಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಮಿಕರಿಗೆ ಲಸಿಕೆ ಹಾಕುವ ಮೂಲಕ ಭಾರತದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಜನವರಿಯಲ್ಲಿ ಪ್ರಾರಂಭವಾಯಿತು. ಎರಡನೇ ಹಂತದಲ್ಲಿ ಹಿರಿಯ ನಾಗರಿಕರು (60 ವರ್ಷಕ್ಕಿಂತ ಮೇಲ್ಪಟ್ಟವರು) ಮತ್ತು 45 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಕೊಮೊರ್ಬಿಡಿಟಿ ಹೊಂದಿದೆ ಜನರು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಈಗ, ಮೂರನೇ ಹಂತದಲ್ಲಿ, ಯಾವುದೇ ಕೊಮೊರ್ಬಿಡಿಟಿಗಳಿಲ್ಲದೆ 45 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.