ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರಂಭಗೊಂಡ ಭಾರತದ ಬೃಹತ್ ಸ್ಥಳಾಂತರ ಕಾರ್ಯಾಚರಣೆ ʼವಂದೇ ಭಾರತ್ ಮಿಷನ್ʼ ವಿದೇಶದಿಂದ 67 ಲಕ್ಷ ಭಾರತೀಯ ನಾಗರಿಕರನ್ನು ಮರಳಿ ಕರೆತಂದಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹೇಳಿದ್ದಾರೆ.
ಹರ್ದೀಪ್ ಸಿಂಗ್ ಪುರಿ ಅವರು ಟ್ವೀಟ್ ಮಾಡಿ, “ವಂದೇ ಭಾರತ್ ಮಿಷನ್ ವಿಶ್ವದಾದ್ಯಂತ ಕಾರ್ಯಾಚರಿಸಿದೆ. ಮಾರ್ಚ್ 6, 2020 ರಿಂದ 67.7 ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಕರೆ ತರಲಾಗಿದೆ. 27 ಏರ್ ಬಬಲ್ ವಾಪಸಾತಿ ಮತ್ತು ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಸುಗಮ ಮಾರ್ಗವನ್ನು ಒದಗಿಸುತ್ತಿವೆ. ವಿಶ್ವದ ಅತಿದೊಡ್ಡ ಭರವಸೆ ಮತ್ತು ಸಂತೋಷದ ಮಿಷನ್ ಆಗಿದೆ” ಎಂದಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗ ಹರಡುತ್ತಿದ್ದಂತೆ ಜಾಗತಿಕ ಪ್ರಯಾಣವನ್ನು ಸ್ಥಗಿತಗೊಳಿಸಿದ ನಂತರ ಭಾರತವು ತನ್ನ ಅತಿದೊಡ್ಡ ಸಂಖ್ಯೆಯ ನಾಗರಿಕರನ್ನು ವಿದೇಶದಿಂದ ಮರಳಿ ಕರೆತರಲು 2020 ರ ಮೇ 7 ರಿಂದ ವಿಶ್ವದ ಅತಿದೊಡ್ಡ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
ಈ ಯೋಜನೆಯು ಮೂಲತಃ 1,90,000 ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ತರಲು ಉದ್ದೇಶಿಸಿತ್ತು.
Vande Bharat Mission soars around the world.
More than 67.7 lakh facilitated since 6 March 2020.
27 air bubbles continue to provide smooth passage for repatriation & International travel.
World’s largest mission of hope & happiness. pic.twitter.com/bA83BIEZBi— Hardeep Singh Puri (@HardeepSPuri) March 22, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.