ನವದೆಹಲಿ: ಲೋಕಸಭೆಯಲ್ಲಿ ಸೋಮವಾರ ಎಲ್ಲಾ ಸಂಸದರು ಹಾಜರಿರಬೇಕು ಎಂದು ಬಿಜೆಪಿ ವಿಪ್ ಜಾರಿ ಮಾಡಿದೆ. ಮೂಲಸೌಕರ್ಯ ನಿಧಿಗೆ ಹೊಸ ಬ್ಯಾಂಕುಗಳ ರಚನೆಗೆ ಸಂಬಂಧಿಸಿದ ಮಸೂದೆಯನ್ನು ಸರ್ಕಾರ ಅಂದು ಮಂಡನೆಗೊಳಿಸುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ವಿಪ್ ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಇತರ ಎರಡು ಮಸೂದೆಗಳನ್ನು ತರಲು ಕೂಡ ಸಿದ್ಧತೆಗಳು ನಡೆದಿವೆ.
ಮೂರು ಸಾಲಿನ ವಿಪ್ ಸರ್ಕಾರದ “ಬಹಳ ಮುಖ್ಯವಾದ ಶಾಸಕಾಂಗ ವ್ಯವಹಾರ” ಕ್ಕೆ ಸಂಸತ್ತಿನ ಸದಸ್ಯರ ಬೆಂಬಲವನ್ನು ಕೋರಿದೆ.
ವಿಪ್ ಮುಖ್ಯಸ್ಥ ರಾಕೇಶ್ ಸಿಂಗ್ ಅವರು ಸಹಿ ಮಾಡಿದ ಪತ್ರದಲ್ಲಿ “ಲೋಕಸಭೆಯ ಎಲ್ಲಾ ಬಿಜೆಪಿ ಸದಸ್ಯರು 2021 ರ ಮಾರ್ಚ್ 22 ರ ಸೋಮವಾರ ಲೋಕಸಭೆಯಲ್ಲಿ ಹಾಜರಿರಬೇಕು, ಅಂದು ಕೆಲವು ಪ್ರಮುಖ ಶಾಸಕಾಂಗ ವ್ಯವಹಾರಗಳನ್ನು ಚರ್ಚೆಗೆ ಮತ್ತು ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಲಾಗಿದೆ.
ಬಿಜೆಪಿ ನೇತೃತ್ವದ ಸರ್ಕಾರ ಸೋಮವಾರ ಮೂರು ಪ್ರಮುಖ ಮಸೂದೆಗಳನ್ನು ಮಂಡನೆಗೊಳಿಸಲಿದೆ. ಹಣಕಾಸು ಮಸೂದೆ 2021 ಈ ಪಟ್ಟಿಯಲ್ಲಿ ಪ್ರಮುಖ ಕಾರ್ಯಸೂಚಿಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.