ನವದೆಹಲಿ: ಭಾರತವು ಕೋವಿಡ್- 19 ಸಾಂಕ್ರಾಮಿಕ ರೋಗದ ಅಂತ್ಯದ ಘಟ್ಟದಲ್ಲಿದೆ ಮತ್ತು ಸಾಂಕ್ರಾಮಿಕ ಭೀತಿಯ ವಿರುದ್ಧ ಯಶಸ್ವಿಯಾಗಿ ಹೊರಹೊಮ್ಮಲು ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಭಿಯಾನವನ್ನು ರಾಜಕೀಯದಿಂದ ಹೊರಗಿಡಬೇಕಾದ ಅನಿವಾರ್ಯತೆ ಇದೆ ಎಂದು ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರು ಹೇಳಿದ್ದಾರೆ.
ಲಸಿಕೆಗಳ ಹಿಂದಿನ ವಿಜ್ಞಾನದ ಮೇಲೆ ನಂಬಿಕೆಯನ್ನು ಇಡಬೇಕು ಮತ್ತು ಹತ್ತಿರದವರಿಗೆ ಮತ್ತು ಆತ್ಮೀಯರಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಸಿಗುವಂತೆ ನೋಡಿಕೊಳ್ಳಬೇಕೆಂದು ಸಚಿವರು ಜನರಿಗೆ ಮನವಿ ಮಾಡಿದ್ದಾರೆ.
ದೈನಂದಿನ ಲಸಿಕಾ ಪ್ರಮಾಣ ದಿನಕ್ಕೆ 15 ಲಕ್ಷಕ್ಕೆಏರಿಕೆಯಾಗಿದೆ ಮತ್ತು ಇದುವರೆಗೆ ಎರಡು ಕೋಟಿ ಲಸಿಕೆ ಡೋಸ್ಗಳನ್ನು ಜನರಿಗೆ ನೀಡಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
“ಇತರ ದೇಶಗಳಿಗಿಂತ ಭಿನ್ನವಾಗಿ, ನಾವು ಸಾಬೀತಾಗಿರುವ ಇಮ್ಯುನೊಜೆನೆಸಿಟಿ ಮತ್ತು ಪರಿಣಾಮಕಾರಿತ್ವದೊಂದಿಗೆ ಸುರಕ್ಷಿತವಾದ ಕೋವಿಡ್ -19 ಲಸಿಕೆಗಳನ್ನು ತ್ವರಿತಗತಿಯಲ್ಲಿ ನಾವು ನೀಡುತ್ತಿದ್ದೇವೆ. ಆರಂಭಿಕ ಫಲಿತಾಂಶಗಳ ಆಧಾರದ ಮೇಲೆ, ಜಗತ್ತಿನ ಲಸಿಕೆಗಳಿಗಿಂತ ಈ ಮೇಡ್ ಇನ್ ಇಂಡಿಯಾ ಲಸಿಕೆಗಳು ಕಡಿಮೆ ಪ್ರತಿಕೂಲ ಘಟನೆಗಳನ್ನು ತೋರಿಸಿದೆ” ಎಂದಿದ್ದಾರೆ.
“ಲಸಿಕೆಯ ನ್ಯಾಯಯುತ ಮತ್ತು ನ್ಯಾಯಸಮ್ಮತವಾದ ವಿತರಣೆಯು ಸಮಯ ಅತಿದೊಡ್ಡ ಅವಶ್ಯಕತೆ ಎಂದ ಹರ್ಷವರ್ಧನ್, ಬಡ ಮತ್ತು ಅಭಿವೃದ್ಧಿಯಾಗದ ರಾಷ್ಟ್ರಗಳು ವೈರಸ್ಗೆ ಹೆಚ್ಚು ತುತ್ತಾಗುವುದನ್ನು ಮುಂದುವರಿಸಿದರೆ, ಎಲ್ಲರಿಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮಗೆ ಸಾಧ್ಯವಾಗುವುದಿಲ್ಲ” ಎಂದು ಒತ್ತಿಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.