ನವದೆಹಲಿ: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಲಕ್ಷದ್ವೀಪದಲ್ಲಿ ಅಟಲ್ ಪರ್ಯಾವರಣ್ ಭವನವನ್ನು ಉದ್ಘಾಟಿಸಿದರು. ಪ್ರಕೃತಿಯ ಬದ್ಧತೆಗೆ ಧಕ್ಕೆಯಾಗದಂತೆ ಲಕ್ಷದ್ವೀಪ ಸಮಗ್ರ ಅಭಿವೃದ್ಧಿಗೆ ಒಳಗಾಗಲಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಲಕ್ಷದ್ವೀಪಕ್ಕೆ ನಾಲ್ಕು ದಿನಗಳ ಅಧಿಕೃತ ಭೇಟಿಯನ್ನು ನೀಡಿರುವ ಅವರು, ನಿನ್ನೆ ಬೆಳಿಗ್ಗೆ ಲಕ್ಷದ್ವೀಪದ ಕವರಟ್ಟಿ ತಲುಪಿದರು.
ಅವರು ಲಕ್ಷದ್ವೀಪ ಆಡಳಿತದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆಗಳಲ್ಲಿ ಭಾಗವಹಿಸಿದರು. ಇಂದು ಮತ್ತು ನಾಳೆ ಅವರು ಸುಹೆಲಿ, ಕದ್ಮತ್ ಮತ್ತು ಬಂಗಾರಂ ದ್ವೀಪಗಳಲ್ಲಿ ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಅವರು ಕೇಂದ್ರ ಪ್ರದೇಶದ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಮುಖ ನವೀನ ಉಪಕ್ರಮಗಳನ್ನು ಸಹ ಮೌಲ್ಯಮಾಪನ ಮಾಡಲಿದ್ದಾರೆ. ಅವರು ಸೋಮವಾರ ದೆಹಲಿಗೆ ವಾಪಾಸ್ ತೆರಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.