ತಿರುವನಂತಪುರಂ: ಕೇರಳದಲ್ಲಿ ಹಿಂದೂ ಭಾವನೆಗಳನ್ನು ಘಾಸಿಗೊಳಿಸುವ ಮತ್ತೊಂದು ಬೆಳವಣಿಗೆ ನಡೆದಿದೆ, ಹಿಂದೂ ವಿರೋಧಿ ಅಂಶಗಳನ್ನೇ ಒಳಗೊಂಡಿರುವ ‘ಮೀಶಾ’ (ಮೀಸೆ) ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ. ಇದಕ್ಕೂ ಮೊದಲು ಎಸ್. ಹರೀಶ್ ಬರೆದಿರುವ ಈ ಕಾದಂಬರಿಯನ್ನು ಮಾತೃಭೂಮಿ ವಾರಪತ್ರಿಕೆ ತಡೆಹಿಡಿದಿತ್ತು, ಹಲವಾರು ಹಿಂದೂ ಸಂಘಟನೆಗಳು ಇದರ ವಿರುದ್ಧ ಪ್ರತಿಭಟಿಸಿದ ನಂತರ ಅದನ್ನು ಸರಣಿಯಾಗಿ ಪ್ರಕಟಿಸಿರುವುದನ್ನು ತಡೆಯಲಾಗಿತ್ತು. ಆದರೆ ನಂತರ ಈ ಕಾದಂಬರಿಯನ್ನು ಡಿಸಿ ಬುಕ್ಸ್ ಪುಸ್ತಕ ರೂಪದಲ್ಲಿ ಪ್ರಕಟಿಸಿತು.
ಕಾದಂಬರಿಯಲ್ಲಿ ಹಿಂದೂ ವಿರೋಧಿ ಟೀಕೆಗಳನ್ನು ಗಮನಿಸಿದ ಎಡಪಂಥೀಯರು ಈ ಕಾದಂಬರಿಯನ್ನು ಬೆಂಬಲಿಸಿದರು ಮತ್ತು ಅದನ್ನು ಸಾರ್ವಜನಿಕ ವಲಯಕ್ಕೆ ತಂದರು.
ಮೀಶಾದ ಕೆಲವು ಆಯ್ದ ಭಾಗಗಳು ಇಲ್ಲಿವೆ, ಅಲ್ಲಿ ಇಬ್ಬರು ಸ್ನೇಹಿತರು ಪರಸ್ಪರ ಮಾತನಾಡುತ್ತಿದ್ದಾರೆ-
“ಈ ಯುವತಿಯರು ಮೇಕಪ್ ಮತ್ತು ಸುಂದರವಾದ ಬಟ್ಟೆಗಳನ್ನು ಧರಿಸಿ ದೇವಾಲಯಗಳಿಗೆ ಏಕೆ ಹೋಗುತ್ತಾರೆಂದು ನಿಮಗೆ ತಿಳಿದಿದೆಯೇ? ”ಆರು ತಿಂಗಳ ಹಿಂದೆ ನನ್ನೊಂದಿಗೆ ಇದ್ದ ಸ್ನೇಹಿತ ಕೇಳಿದ. “ಪ್ರಾರ್ಥಿಸಲು” ಎಂದು ನಾನು ಉತ್ತರಿಸಿದೆ.
“ಇಲ್ಲ, ನೀವು ಹತ್ತಿರದಿಂದ ನೋಡುತ್ತೀರಿ, ಅವರು ಯಾಕೆ ಅತ್ಯಂತ ಸುಂದರವಾದ ಉಡುಪನ್ನು ಮತ್ತು ಪ್ರಾರ್ಥನೆ ಮಾಡಲು ಮೇಕ್ಅಪ್ ಧರಿಸುತ್ತಾರೆ? ಅವರು ಲೈಂಗಿಕ ಕ್ರಿಯೆಯಲ್ಲಿನ ತಮ್ಮ ಇಚ್ಛೆಯನ್ನು ಹೇಳುತ್ತಿದ್ದಾರೆ. ಇಲ್ಲದಿದ್ದರೆ ಅವರು ತಿಂಗಳಿಗೆ ನಾಲ್ಕು ಅಥವಾ ಐದು ದಿನ ಏಕೆ ದೂರವಿರುತ್ತಾರೆ? ತಾವು ಲಭ್ಯವಿಲ್ಲದಿರುವ ಬಗ್ಗೆ ಇತರರಿಗೆ ತಿಳಿಸುವುದನ್ನು ಬಿಟ್ಟು ಬೇರೇನೂ ಉದ್ದೇಶವು ಇಲ್ಲ” ಎಂದ.
ಇಷ್ಟು ಕೆಟ್ಟ ಸಂಭಾಷಣೆಯನ್ನು ಒಳಗೊಂಡ ಕಾದಂಬರಿಗೆ ಪುರಸ್ಕಾರ ನೀಡಿರುವ ಕೇರಳ ಸಾಹಿತ್ಯ ಅಕಾಡಮಿಯ ಕಾರ್ಯ ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ.
ಹಿರಿಯ ಬಿಜೆಪಿ ಮುಖಂಡ ಮತ್ತು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಳೀಧರನ್ ಅವರು ಎಲ್ಡಿಎಫ್ ಸರ್ಕಾರದ ಹಿಂದೂ ವಿರೋಧಿ ಮನೋಭಾವವನ್ನು ಪ್ರಶ್ನಿಸಿದ್ದಾರೆ. ಹಿಂದೂ ಸಂಕೇತಗಳನ್ನು ಮತ್ತು ಮಹಿಳಾ ಸಮುದಾಯವನ್ನು ಅವಮಾನಿಸುವ ಜನರಿಗೆ ಪುರಸ್ಕಾರ ನೀಡುವುದು ಕೇರಳ ಸರ್ಕಾರದ ವರ್ತನೆ ಎಂದು ಅವರು ಹೇಳಿದ್ದಾರೆ
ಕೇರಳದ ಹಿರಿಯ ಬಿಜೆಪಿ ಮುಖಂಡ ಶೋಭಾ ಸುರೇಂದ್ರನ್ ಅವರು ಕೇರಳ ಸಾಹಿತ್ಯ ಅಕಾಡೆಮಿಯ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ‘ಮೀಶಾ’ ಪ್ರಶಸ್ತಿ ನೀಡುವ ನಿರ್ಧಾರ ಹಿಂದೂ ಸಮಾಜ ಮತ್ತು ಮಹಿಳಾ ಸಮುದಾಯಕ್ಕೆ ಎಸೆದ ಬಹಿರಂಗ ಸವಾಲಾಗಿದೆ ಎಂದು ಹೇಳಿದರು. ಹಿಂದೂ ವಿರೋಧಿ ಈ ಕ್ರಮಕ್ಕೆ ಸಿಪಿಐಎಂ ರಾಜಕೀಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
S Hareesh’s novel “Meesha” wins the Kerala Sahithya Academy Award. Translation of the excerpt given here:
“Why do women go to temples?” a friend asked.
“To pray”, I said. pic.twitter.com/VuSPDW3Rdw— N (@thegeminian_) February 15, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.