ನವದೆಹಲಿ: ಪಾಕಿಸ್ಥಾನಕ್ಕೆ ಮತ್ತೊಮ್ಮೆ ಮುಜುಗರ ಉಂಟು ಮಾಡುವ ಬೆಳವಣಿಗೆ ನಡೆದಿದೆ, ಪಾಕಿಸ್ಥಾನದ ಮಾಜಿ ರಾಜತಾಂತ್ರಿ ಆಘ ಹಿಲಾಲಿ ಬಾಲಕೋಟ್ ವೈಮಾನಿಕ ದಾಳಿಯಲ್ಲಿ 300 ಭಯೋತ್ಪಾದಕರು ಸಾವನ್ನಪ್ಪಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಟಿವಿ ಚರ್ಚೆಗಳಲ್ಲಿ ಪಾಕ್ ಸೇನೆಯ ಪರ ವಹಿಸುವ ಆಘ ಅವರು, ಬಾಲಕೋಟ್ ದಾಳಿಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂಬ ಪಾಕಿಸ್ಥಾನದ ನಿಲುವಿಗೆ ವಿರುದ್ಧ ಹೇಳಿಕೆ ನೀಡಿದ್ದಾರೆ.
ಪಾಕಿಸ್ಥಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬಾಲಕೋಟ್ನಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ತರಬೇತಿ ಶಿಬಿರ ಮೇಲೆ ಭಾರತೀಯ ವಾಯುಪಡೆಯು ದಾಳಿ ನಡೆಸಿದ ಬಳಿಕ ಮುಖ ಉಳಿಸುವ ಸಲುವಾಗಿ, ಒಂದೇ ಒಂದು ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪಾಕಿಸ್ಥಾನ ಹೇಳಿತ್ತು.
“ಭಾರತವು ಅಂತರರಾಷ್ಟ್ರೀಯ ಗಡಿಯನ್ನು ದಾಟಿ ನಡೆಸಿದ ದಾಳಿಯಿಂದ ಕನಿಷ್ಠ 300 ಮಂದಿ ಸತ್ತರು ಎಂದು ವರದಿಯಾಗಿದೆ. ನಮ್ಮ ಗುರಿ ಅವರಿಗಿಂತ ಭಿನ್ನವಾಗಿತ್ತು. ನಾವು ಅವರ ಹೈ ಕಮಾಂಡ್ ಅನ್ನು ಗುರಿಯಾಗಿಸಿಕೊಂಡೆವು. ಅದು ನಮ್ಮ ಕಾನೂನುಬದ್ಧ ಗುರಿಯಾಗಿತ್ತು ಏಕೆಂದರೆ ಅವರು ಮಿಲಿಟರಿ ಸಿಬ್ಬಂದಿಯಾಗಿದ್ದರು”ಎಂದು ಆಘಾ ಹಿಲಾಲಿ ಹೇಳಿದ್ದಾರೆ.
ಇತ್ತೀಚಿಗಷ್ಟೇ ಪಾಕಿಸ್ಥಾನದ ರಾಜಕೀಯ ಮುಖಂಡರೊಬ್ಬರು, ಒಂದು ವೇಳೆ ಅಭಿನಂದನ್ ವರ್ತಮಾನ್ ಅವರನ್ನು ಬಿಡುಗಡೆ ಮಾಡದೇ ಹೋದರೆ ಅದೇ ದಿನ ರಾತ್ರಿ ಭಾರತ ಪಾಕಿಸ್ಥಾನದ ಮೇಲೆ ದಾಳಿ ನಡೆಸುವುದರಲ್ಲಿತ್ತು. ಇದಕ್ಕೆ ಹೆದರಿ ಪಾಕಿಸ್ಥಾನ ಅವರನ್ನು ಬಿಡುಗಡೆ ಮಾಡಿತು ಎಂದಿದ್ದರು.
ಒಟ್ಟಿನಲ್ಲಿ ಪಾಕಿಸ್ಥಾನದ ನಿಜ ಬಣ್ಣವನ್ನು ಅದರದ್ದೇ ರಾಜಕೀಯ ನಾಯಕರು ಹರಾಜು ಹಾಕುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.