ನವದೆಹಲಿ: ನಿರ್ಮಾಣ ಕ್ಷೇತ್ರದ ದಿಗ್ಗಜ ಲಾರ್ಸೆನ್ & ಟೌಬ್ರೊ (ಎಲ್ &ಟಿ) ಉತ್ತರಾಖಂಡದ ಋಷಿಕೇಶ ಮತ್ತು ಕರ್ಣಪ್ರಯಾಗವನ್ನು ಸಂಪರ್ಕಿಸುವ ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದು, ಇದಕ್ಕಾಗಿ ಸುಮಾರು 3,338 ಕೋಟಿ ರೂಪಾಯಿಗಳ ಗುತ್ತಿಗೆ ಪಡೆದುಕೊಂಡಿದೆ.
3337.60 ಕೋಟಿ ರೂ.ಗಳ ಪ್ರಸ್ತಾವನೆಯೊಂದಿಗೆ ಎಲ್ & ಟಿ ಕನ್ಸ್ಟ್ರಕ್ಷನ್ ಅತಿ ಕಡಿಮೆ ಬಿಡ್ಡುದಾರನಾಗಿ ಹೊರಹೊಮ್ಮಿದ್ದು, ಈ ಮೂಲಕ ಯೋಜನೆಯನ್ನು ಗೆದ್ದಕೊಂಡಿದೆ.
ಈ ಯೋಜನೆಯು ಋಷಿಕೇಶ ಮತ್ತು ಕರ್ಣಪ್ರಯಾಗ್ ನಡುವೆ ರೈಲು ಸಂಪರ್ಕವನ್ನು ಒದಗಿಸುತ್ತದೆ ಮತ್ತು ಉತ್ತರಾಖಂಡದ ಯಾತ್ರಾ ಕೇಂದ್ರಗಳಿಗೆ ಪ್ರವೇಶವನ್ನು ಸರಾಗಗೊಳಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುತ್ತದೆ.
ಸಂಕೀರ್ಣ ಭೌಗೋಳಿಕ ಸವಾಲುಗಳನ್ನು ಹೊಂದಿರುವ 125 ಕಿ.ಮೀ ಉದ್ದದ ಈ ರೈಲು ಮಾರ್ಗವನ್ನು ಸರ್ಕಾರಿ ಸ್ವಾಮ್ಯದ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ನಿರ್ವಹಿಸುತ್ತಿದೆ.
ಈ ರೈಲ್ವೆ ಯೋಜನೆಯ 84% ಕ್ಕಿಂತ ಹೆಚ್ಚು ಸುರಂಗಗಳು ಮತ್ತು ಸೇತುವೆಗಳನ್ನು ಒಳಗೊಂಡಿದೆ. ಈ ಯೋಜನೆಯು ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಮತ್ತು ಒಟ್ಟಾರೆ ಕೆಲಸಗಳಲ್ಲಿ ಸುರಂಗಗಳ ನಿರ್ಮಾಣ, ನಿರ್ಮಾಣ ಶಾಫ್ಟ್ ಮತ್ತು ಇತರ ಪೂರಕ ಕಾರ್ಯಗಳು ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.