ನವದೆಹಲಿ: ಅಮೆರಿಕಾದ ವಿವಿಧ ನಗರಗಳಲ್ಲಿ ಶನಿವಾರ ಅನಿವಾಸಿ ಭಾರತೀಯರು ಪೌರತ್ವ ತಿದ್ದುಪಡಿ ಕಾಯ್ದೆ 2019ರ ಪರವಾಗಿ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿದರು.
ಚಿಕಾಗೊ, ಸಿಯಾಟಲ್ ಮತ್ತು ಅಟ್ಲಾಂಟಾದಂತಹ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ, ಭಾರತೀಯ ವಲಸಿಗರು ಸಿಎಎ ಉದ್ದೇಶದ ಬಗ್ಗೆ ಅಮೆರಿಕಾದಲ್ಲಿ ಹರಡಿರುವ ತಪ್ಪು ಮಾಹಿತಿಯ ವಿರುದ್ಧ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.
‘ಸಿಎಎ ಮುಸ್ಲಿಂ ವಿರೋಧಿ ಅಲ್ಲ’, ‘ಸಿಎಎ ಎಲ್ಲರನ್ನೂ ಒಳಗೊಳ್ಳುತ್ತದೆ’, ‘ಸಿಎಎ ತಾರತಮ್ಯವಿಲ್ಲದ ಕಾಯ್ದೆ’, “ನಾವು ಮೋದಿಯನ್ನು ಬೆಂಬಲಿಸುತ್ತೇವೆ” ಎಂಬಿತ್ಯಾದಿ ಫಲಕಗಳೊಂದಿಗೆ ಜನರು ಈ ಕಾಯ್ದೆಯನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಿದರು.
ಸಿಯಾಟಲ್ನಲ್ಲಿ ಕಾರ್ಯಕ್ರಮ ಆಯೋಜಿಸಿದ ಆರೋಗ್ಯ ಮತ್ತು ಮೆಡಿಕೇರ್ ವಿಮಾ ಸಲಹೆಗಾರರಾದ ಅರ್ಚನಾ ಸುನಿಲ್ ಅವರು ಮಾತನಾಡಿ, “ಸಿಎಎಗೆ ಸೀಮಿತ ವ್ಯಾಪ್ತಿಯಿದೆ ಎಂಬುದು ಜನರು ನೋಡಲು ವಿಫಲವಾದ ಸಂಗತಿಯಾಗಿದೆ, ಈಗಾಗಲೇ ಭಾರತದಲ್ಲಿ ಇರುವ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪುನರ್ವಸತಿ ನೀಡುವುದು ಮಾತ್ರ ಈ ಕಾಯ್ದೆಯ ಉದ್ದೇಶ” ಎಂದಿದ್ದಾರೆ.
ಈ ವಿಷಯದಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಸೇರಿದಂತೆ ಹಲವಾರು ನಾಯಕರು ಕೂಡ ಭರವಸೆ ನೀಡಿದ್ದರು ಎಂದು ಸುನಿಲ್ ಒತ್ತಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.