ಹೈದರಾಬಾದ್: ಕಲೆಯೆಂಬುದು ಕೆಲವರಿಗೆ ಜನ್ಮದತ್ತವಾಗಿಯೇ ಬಂದಿರುತ್ತದೆ. ಕಲೆಯಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಯಶಸ್ಸನ್ನು ಕೂಡ ಕಲಾವಿದರು ಕಾಣುತ್ತಾರೆ. ಅಂಥವರಲ್ಲಿ ಹೈದರಾಬಾದಿನ ರಾಮಗಿರಿ ಸ್ವರಿಕ ಅವರು ಕೂಡ ಒಬ್ಬರು. ಅಕ್ಕಿ ಕಾಳುಗಳಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಬರೆಯುವ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ.
4,042 ಅಕ್ಕಿಕಾಳುಗಳಲ್ಲಿ ಸ್ವರಿಕ ಭಗವದ್ಗೀತೆಯನ್ನು ಬರೆದಿದ್ದಾರೆ. ಇದಕ್ಕಾಗಿ ಅವರು ತೆಗೆದುಕೊಂಡ ಸಮಯ 150 ಗಂಟೆ.
ಸೂಕ್ಷ್ಮ ಕಲೆಯಲ್ಲಿ ಅತೀವ ಆಸಕ್ತಿ ಇರುವ ಅವರು, ಈಗಾಗಲೇ ಹಲವು ಸೂಕ್ಷ್ಮ ಕಲೆಗಳನ್ನು ರಚಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಸಂವಿಧಾನದ ಪ್ರಿಯಾಂಬಲ್ ಅನ್ನು ಕೂದಲೆಳೆಯಲ್ಲಿ ಬರೆದು ತೆಲಂಗಾಣದ ಗವರ್ನರ್ ಅವರಿಂದ ಸನ್ಮಾನ ಮಾಡಿಸಿಕೊಂಡಿದ್ದರು.
ತನ್ನ ಸೂಕ್ಷ್ಮ ಕಲಾಕೃತಿಗಳನ್ನು ರಚಿಸಲು ಅವರು ಮ್ಯಾಗ್ನಿಫೈಯಿಂಗ್ ಗ್ಲಾಸ್ ಬಳಸುವುದಿಲ್ಲ ಎಂಬುದು ವಿಶೇಷ. ಇದುವರೆಗೆ ಅವರು ಸುಮಾರು 2000ಕ್ಕೂ ಅಧಿಕ ಸೂಕ್ಷ್ಮ ಕಲಾಕೃತಿಗಳನ್ನು ರಚನೆ ಮಾಡಿದ್ದಾರೆ.
ಅವರ ಕಲೆಗೆ ದೆಹಲಿ ಸಾಂಸ್ಕೃತಿಕ ಅಕಾಡೆಮಿ ಸನ್ಮಾನಿಸಿ, 2019ರಲ್ಲಿ ರಾಷ್ಟ್ರೀಯ ಅವಾರ್ಡ್ ನೀಡಿದೆ.
ದೇಶೀಯ ಮಟ್ಟದಲ್ಲಿ ಸೂಕ್ಷ್ಮ ಕಲೆಗಳಿಂದ ಹೆಸರು ಮಾಡಿರುವ ಅವರು ಇದೀಗ ತಮ್ಮ ಕಲೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.