ಸಿಂಗಾಪುರ: ಸಿಂಗಾಪುರದ 164 ವರ್ಷ ಹಳೆಯ ಹಿಂದೂ ದೇಗುಲವನ್ನು ಜೀರ್ಣೋದ್ಧಾರಗೊಳಿಸುವ ಸಲುವಾಗಿ ಭಾರತದ 20 ಶಿಲ್ಪಿಗಳು ಒಟ್ಟುಗೂಡಿದ್ದಾರೆ. ಈ ದೇಗುಲವನ್ನು ಈಗಾಗಲೇ ರಾಷ್ಟ್ರೀಯ ಸ್ಮಾರಕವೆಂದು ಘೋಷಣೆ ಮಾಡಲಾಗಿದೆ. 20 ಕೋಟಿ ರೂಪಾಯಿ ವೆಚ್ಚದಲ್ಲಿ ಇದರ ರಪೇರಿ ಕಾರ್ಯ ಮಾಡಲಾಗುತ್ತಿದೆ.
ಲಿಟ್ಲ್ ಇಂಡಿಯಾದಲ್ಲಿರುವ ಶ್ರೀ ಶ್ರೀನಿವಾಸ ಪೆರುಮಾಲ್ ದೇಗುಲದ ಜೀರ್ಣೋದ್ಧಾರ ಕಾರ್ಯ ವರ್ಷಗಳಿಂದ ನಡೆಯುತ್ತಿದೆ, ನೂರಾರು ಸಂಖ್ಯೆಯ ಭಾರತೀಯ ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿದ್ದಾರೆ.
ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದರೂ ದೇಗುಲದಲ್ಲಿ ಪೂಜಾದಿ ಕೈಂಕರ್ಯಗಳು ಮುಂದುವರೆಯುತ್ತಲೇ ಇದೆ. ಈ ದೇಗುಲ ಜೀವಂತ ಸ್ಮಾರಕ ಎಂದು ಅದರ ಆಡಳಿತ ನಿರ್ದೇಶಕರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.