ವಲ್ಸಾದ್: ಭಾರತವನ್ನು ಡಿಜಟಲೀಕರಣಗೊಳಿಸುವತ್ತ ಒಂದು ಹೆಜ್ಜೆ ಮುಂದೆ ಇಟ್ಟಿರುವ ಬಿಎಸ್ಎನ್ಎಲ್ ಬುಧವಾರ ಗುಜರಾತಿನ ಉದ್ವಾಡ ಗ್ರಾಮದಲ್ಲಿ ಸಂಸದ್ ಆದರ್ಶ್ ಗ್ರಾಮ ಯೋಜನೆಯಡಿ ಉಚಿತ ವೈ-ಫೈ ಸೇವೆಯನ್ನು ಒದಗಿಸಿದೆ. ರಾಜ್ಯ ಸಂಪರ್ಕ ಸಚಿವ ಮನೋಜ್ ಸಿನ್ಹಾ ಇದನ್ನು ಉದ್ಘಾಟನೆಗೊಳಿಸಿದ್ದಾರೆ.
ಇದರಿಂದಾಗಿ ವಲ್ಸಾದ್ ಜಿಲ್ಲೆಯ ಉದ್ವಾಡ ಗ್ರಾಮದ ಸುಮಾರು 6 ಸಾವಿರ ಜನರು ಪ್ರಯೋಜನ ಪಡೆಯಲಿದ್ದಾರೆ. ಈಗಾಗಲೇ ಇಲ್ಲಿನ 17 ಕಡೆಗಳಲ್ಲಿ ಹಾಟ್ಸ್ಪಾಟ್ಗಳನ್ನು ಅಳವಡಿಸಲಾಗಿದೆ. ಬಿಎಸ್ಎನ್ಎಲ್ನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಗ್ರಾಮವನ್ನು ಸಚಿವೆ ಸ್ಮೃತಿ ಇರಾನಿಯವರು ದತ್ತು ಪಡೆದುಕೊಂಡಿದ್ದಾರೆ.
ಪಾನ್ ಇಂಡಿಯಾ ಆಧಾರದಲ್ಲಿ ಬಿಎಸ್ಎನ್ಎಲ್ 35,000 ಹಾಟ್ಸ್ಪಾಟ್ಗಳನ್ನು ದೇಶದ ವಿವಿಧೆಡೆ ಅಳವಡಿಸಲು ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.