ನವದೆಹಲಿ: ಪಾಕಿಸ್ಥಾನದೊಂದಿಗಿನ ಪಶ್ಚಿಮ ಭಾಗದ ಗಡಿಯಾದ ಗುಜರಾತಿನ ಬನಸ್ಕಾಂತ ಜಿಲ್ಲೆಯ ದೀಸ ಸಮೀಪ ಯುದ್ಧನೆಲೆಯನ್ನು ಸ್ಥಾಪನೆಗೊಳಿಸುವ ವಾಯುಸೇನೆಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ಸಂಪುಟ ಸಮಿತಿ(ಸಿಸಿಎಸ್) ಅನುಮೋದನೆಯನ್ನು ನೀಡಿದೆ.
ಈ ಭಾಗದಲ್ಲಿ ಯುದ್ಧನೆಲೆ ಸ್ಥಾಪನೆ ಮಾಡುವುದರಿಂದ ಪಾಕಿಸ್ಥಾನದ ವಿರುದ್ಧ ಭಾರತದ ಮಿಲಿಟರಿ ಸಾಮರ್ಥ್ಯ ಹೆಚ್ಚಾಗಲಿದೆ.
ಯುದ್ಧನೆಲೆ ಸ್ಥಾಪನೆಗೆ 1 ಸಾವಿರ ಕೋಟಿ ರೂಪಾಯಿ ವ್ಯಯವಾಗಲಿದೆ. ಇದರಡಿ ರನ್ವೇ ವಿಸ್ತರಣೆಗೊಳ್ಳಲಿದೆ, ಫೈಟರ್ ಪೆನ್ಸ್ ನಿರ್ಮಾಣವಾಗಲಿದೆ, ಆಡಳಿತಾತ್ಮ ಸೌಲಭ್ಯಗಳ ಸ್ಥಾಪನೆಯಾಗಲಿದೆ. ಇದಕ್ಕಾಗಿ 4 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.