ಚೆನ್ನೈ: ವಿಶ್ವ ಹಿಂದೂ ಪರಿಷದ್ ವತಿಯಿಂದ ಆರಂಭಿಸಲಾಗಿರುವ ರಾಮ ರಾಜ್ಯ ರಥ ಯಾತ್ರೆ ಬುಧವಾರ ತಮಿಳುನಾಡಿನ ಮಧುರೈ ಜಿಲ್ಲೆಯನ್ನು ಪ್ರವೇಶಿಸಿದೆ. 36 ದಿನಗಳ ಈ ರಥಯಾತ್ರೆಗೆ ಫೆಬ್ರವರಿಯಲ್ಲಿ ಅಯೋಧ್ಯಾದಲ್ಲಿ ಚಾಲನೆಯನ್ನು ನೀಡಲಾಗಿತ್ತು.
ರಾಮಮಂದಿರ ನಿರ್ಮಾಣದ ಉದ್ದೇಶದೊಂದಿಗೆ ಆರಂಭಗೊಂಡಿರುವ ಈ ರಥಯಾತ್ರೆ 6,000 ಕಿಲೋಮೀಟರ್ಗಳನ್ನು ಪ್ರಯಾಣಿಸಿ ಮಾ.26ರಂದು ರಾಮೇಶ್ವರಂನಲ್ಲಿ ಕೊನೆಗೊಳ್ಳಲಿದೆ.
ಮರದ ವಿಭಿನ್ನ ಕೆತ್ತನೆಯೊಂದಿಗೆ ಈ ರಥವನ್ನು ನಿರ್ಮಾಣ ಮಾಡಲಾಗಿದ್ದು, ಅಯೋಧ್ಯಾದಲ್ಲಿನ ಪ್ರಸ್ತಾಪಿತ ರಾಮ ಮಂದಿರದ ಮಾದರಿಯನ್ನು ಇದು ಒಳಗೊಂಡಿದೆ. 28 ಕಂಬಗಳನ್ನು ಹೊಂದಿರುವ ಈ ರಥವನ್ನು ಮಹಾರಾಷ್ಟ್ರದ ಕಲಾವಿದರು ರೂ.೨೫ ಲಕ್ಷ ವೆಚ್ಚದಲ್ಲಿ ನಾಲ್ಕು ತಿಂಗಳುಗಳನ್ನು ತೆಗೆದುಕೊಂಡು ರಚಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.