ರಾಂಚಿ: ನೀರಾವರಿ ಯೋಜನೆ ಕನಹಾರ್ ಬ್ಯಾರೇಜ್ ಸ್ಥಾಪನೆಗೆ ಜಾರ್ಖಾಂಡ್ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಕೇಂದ್ರ ಮತ್ತು ರಾಜ್ಯದ ನಡುವೆ ಉನ್ನತ ಮಟ್ಟದ ಸಭೆ ನಡೆದಿದೆ. ಈ ಯೋಜನೆ ಜಾರಿಯಾದ ಬಳಿಕ ಇಡೀ ರಾಜ್ಯ ಬರ ಮುಕ್ತಗೊಳ್ಳುವ ನಿರೀಕ್ಷೆ ಇದೆ.
ಗಹ್ರವ ಜಿಲ್ಲೆಯ ಖೂರಿ ಗ್ರಾಮದಲ್ಲಿ ಬ್ಯಾರೇಜ್ ನಿರ್ಮಾಣವಾಗುತ್ತಿದ್ದು, ಇದು 17.10ಕಿಲೋ ಮೀಟರ್ ಉದ್ದದ ಪ್ರಮುಖ ಕಾಲುವೆಯನ್ನು ಒಳಗೊಂಡಿದೆ. ಅದು ಲವದೋನಿಗೆ ಹರಿಯಲಿದ್ದು, ಅಲ್ಲಿ ಅಣೆಕಟ್ಟನ್ನು ಕಟ್ಟಲಾಗುತ್ತದೆ. ಈ ಅಣೆಕಟ್ಟುವಿನ ಬಲ, ಎಡ ಎರಡೂ ಭಾಗದಲ್ಲಿ ಎರಡು ಕಾಳುವೆಗಳಿರಲಿದೆ. ಇದರ ಉದ್ದ 82.22 ಮತ್ತು 46.97 ಕಿಮೀ ಆಗಿದೆ.
ಸುಮಾರು 53,283 ಹೆಕ್ಟೆರ್ ಪ್ರದೇಶದಲ್ಲಿ ಈ ನೀರಾವರಿ ಯೋಜನೆ ಜಾರಿಗೊಳ್ಳಲಿದ್ದು, ಇದರ ಪ್ರಯೋಜನವನ್ನು 27 ಲಕ್ಷ 40 ಸಾವಿರ ಜನರು ಪಡೆದುಕೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.