ನವದೆಹಲಿ: ಬೆಳೆಯುತ್ತಿರುವ ಚೀನಾದೊಂದಿಗೆ ಸಮರ್ಥವಾಗಿ ವ್ಯವಹರಿಸಿದರೆ ಭಾರತ ೨೦೩೦ರ ವೇಳೆಗೆ ಜಾಗತಿಕ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಬಹುದು ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಭಾರತದ ಸೂಪರ್ ಪವರ್ ಆಗಬೇಕೆಂದು ಬಯಸಿದರೆ ಮೊದಲು ಅದು ತನ್ನ ನೆರೆಯ ರಾಷ್ಟ್ರಗಳನ್ನು ಅದರಲ್ಲೂ ಮುಖ್ಯವಾಗಿ ಚೀನಾದೊಂದಿಗೆ ಸರಿಯಾಗಿ ವ್ಯವಹರಿಸಬೇಕು, ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ಮಾಜಿ ರಾಜತಾಂತ್ರಿಕ ಕೆಸಿ ಸಿಂಗ್ ಮತ್ತು ಮಾಜಿ ಸೇನಾಧಿಕಾರಿ ಟಿಸಿಎ ರಾಘವನ್ ಹೇಳಿದ್ದಾರೆ.
ನ್ಯೂಸ್ 18 ಚಾನೆಲ್ ಆಯೋಜಿಸಿದ್ದ ’ರೈಸಿಂಗ್ ಇಂಡಿಯಾ ಕರ್ಟೆನ್ ರೈಸರ್ ಡಿಬೆಟ್’ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ ಉದಯಿಸುತ್ತಿರುವ ಶಕ್ತಿ ಎಂಬುದರಲ್ಲಿ ಅನುಮಾನವಿಲ್ಲ, ಮುಂದೆಯೂ ಅದು ಶಕ್ತಿಯಾಗಿ ಹೊರಹೊಮ್ಮುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅದು ಬೆಳೆಯುತ್ತಿರುವ ಮತ್ತು ಭಾರತದ ಬೆಳವಣಿಗೆಯ ಬಗ್ಗೆ ಆತಂಕಿತಗೊಂಡಿರುವ ಚೀನಾವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.