ಅಗರ್ತಾಲ: ತ್ರಿಪುರಾದಲ್ಲಿನ ಬಿಜೆಪಿಯ ಗೆಲುವು ಐತಿಹಾಸಿಕ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಲ್ಲಿ ನಾವು ಪ್ರಗತಿ ಮತ್ತು ಸಮೃದ್ಧಿಯ ದೀಪವನ್ನು ಹಚ್ಚಿದ್ದೇವೆ ಎಂದಿದ್ದಾರೆ.
ನೂತನ ಸಿಎಂ ಬಿಪ್ಲಬ್ ಕುಮಾರ್ ದೇಬ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇವತ್ತು ತ್ರಿಪುರಾಗೆ ಐತಿಹಾಸಿಕ ದಿನ. ಇವತ್ತೇ ದೀಪಾವಳಿ ಆಚರಿಸಿದಂತೆ ಕಂಡುಬರುತ್ತಿದೆ. ಹೊಸ ಉತ್ಸಾಹ, ಉಲ್ಲಾಸ ಇಲ್ಲಿ ಗೋಚರಿಸುತ್ತಿದೆ’ ಎಂದಿದ್ದಾರೆ.
‘ಭಾರತದ ಇತಿಹಾಸದಲ್ಲಿ ಕೆಲವೇ ಚುನಾವಣೆಗಳು ಚರ್ಚೆಯಲ್ಲಿರುತ್ತದೆ. ಇದರಲ್ಲಿ 2018ರ ತ್ರಿಪುರಾ ಚುನಾವಣೆಯೂ ಒಂದು ಉದಾಹರಣೆಯಾಗಲಿದೆ. ಈ ಚುನಾವಣೆಯನ್ನು ಜನ ಚರ್ಚಿಸುತ್ತಲೇ ಇರುತ್ತಾರೆ’ ಎಂದರು.
ಈಗ ಪ್ರತಿಪಕ್ಷದ ಸ್ಥಾನದಲ್ಲಿರುವವರು ಸುಧೀರ್ಘ ಅವಧಿಯ ಅಧೀಕಾರ ನಡೆಸಿ ಅನುಭವ ಇರುವವರು. ನಮ್ಮದು ಹೊಸ ಸರ್ಕಾರ ಮತ್ತು ವಯಸ್ಸಿನಲ್ಲೂ ನಮ್ಮ ತಂಡ ಕಿರಿಯದು. ಅವರಿಗೆ ಅನುಭವವಿದ್ದರೆ ನಮಗೆ ಉಮೇದು, ಉತ್ಸಾಹ ಇದೆ. ತ್ರಿಪುರಾದ ಪ್ರಗತಿಗೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.