ಭೋಪಾಲ್: ಮಧ್ಯಪ್ರದೇಶ ಸಿಎಂ ಶಿವರಾಜ್ ಚೌವ್ಹಾಣ್ ತಮ್ಮ ರಾಜ್ಯದ ಬಡವರಿಗೆ ಹಲವರು ಯೋಜನೆಗಳನ್ನು ಘೋಷನೆ ಮಾಡಿದ್ದಾರೆ. ಇದರಲ್ಲಿ ಬಡವರ ಮನೆಯಲ್ಲಿ ಮಗು ಹುಟ್ಟಿದರೆ ರೂ.12,000 ಧನಸಹಾಯ, ಬಡವನ ಅಂತ್ಯಕ್ರಿಯೆಗೆ 5 ಸಾವಿರ ರೂಪಾಯಿ ಧನಸಹಾಯಗಳು ಸೇರಿವೆ.
ಅಲ್ಲದೇ 60 ವರ್ಷಗಳೊಳಗಿನ ಮನುಷ್ಯ ಅಕಾಲಿಕವಾಗಿ ನಿಧನರಾದರೆ ಅವರ ಕುಟುಂಬದವರಿಗೆ ರೂ.2ಲಕ್ಷದವರೆಗೆ ಇನ್ಸುರೆನ್ಸ್ ಮೂಲಕ ಹಣ ನೀಡುವ ಯೋಜನೆಯನ್ನೂ ಅವರು ಘೋಷಿಸಿದ್ದಾರೆ.
ಬಡವರಿಗೆ ತಿಂಗಳಿಗೆ ರೂ.200ಕ್ಕೆ ವಿದ್ಯುತ್ ಪೂರೈಕೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ಹೀಗಾಗೀ ಇನ್ನು ಮುಂದೆ ಅಲ್ಲಿನ ಜನರು ಮೀಟರ್ ಲೆಕ್ಕಾಚಾರದಿಂದ ದೂರವಿರಲಿದ್ದಾರೆ.
ಬಡವನ ಮನೆಯಲ್ಲಿ ಹೆಣ್ಣು ಅಥವಾ ಗಂಡು ಮಗು ಹುಟ್ಟಿದರೆ ರೂ.12ಸಾವಿರ ಧನಸಹಾಯ ಸಿಗಲಿದೆ. ಅಂತ್ಯಕ್ರಿಯೆಗೂ ೫ ಸಾವಿರ ರೂಪಾಯಿ ಧನಸಹಾಯ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.