ನವದೆಹಲಿ: ದೇಶ ಕಾಯುವ ಸೈನಿಕರಿಗೆ ನಾವು ಎಷ್ಟೇ ಕೃತಜ್ಞತೆ ಅರ್ಪಿಸಿದರೂ ಸಾಲದು. ಇದೀದ ಇದೇ ಮೊದಲ ಬಾರಿಗೆ ಸೈನಿಕರ ಗೌರವಾರ್ಥ ಹಿಂದೂಸ್ಥಾನ್ ಟೈಮ್ಸ್ ‘ಸೊಲ್ಜರಥಾನ್’ ಎಂಬ ಮ್ಯಾರಥಾನ್ನ್ನು ಮಾ.11ರಂದು ದೆಹಲಿಯ ಜವಹಾರ್ಲಾಲ್ ಸ್ಟೇಡಿಯಂನಿಂದ ಅಯೋಜನೆಗೊಳಿಸಲಾಗಿದೆ.
ಈ ಮ್ಯಾರಥಾನ್ನಲ್ಲಿ ಸುಮಾರು 6000 ಮಂದಿ ಭಾಗವಹಿಸಲಿದ್ದಾರೆ. ಓಟಗಾರರು, ಸೈನಿಕರ ಮತ್ತು ಹುತಾತ್ಮರ ಕುಟುಂಬಿಕರು, ದೆಹಲಿಯ ಆರ್ಮಿ ಮತ್ತು ನಾವಲ್ ಸ್ಕೂಲ್ನ ಶಾಲಾ ಮಕ್ಕಳು ಇದರಲ್ಲಿ ಭಾಗಿಯಾಗಲಿದ್ದಾರೆ.
10 ಕಿಲೋಮೀಟರ್ , 5 ಕಿಲೋಮೀಟರ್, 3 ಕಿಲೋಮೀಟರ್ ಮತ್ತು ವ್ಹಿಲ್ ಚೇರ್ ಕೆಟಗರಿಯಲ್ಲಿ ಓಟಗಳನ್ನು ಆಯೋಜನೆಗೊಳಿಸಲಾಗಿದೆ. ಇಲ್ಲಿ ಸಂಗ್ರಹವಾದ ಹಣ ಸೇನೆಯ ಕೃತಕ ಕಾಲು ಕೇಂದ್ರ(ಎಎಲ್ಎಸ್೦ಘೆ)ಗೆ ದೇಣಿಗೆಯಾಗಿ ಹೋಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.