ಸೊಂಪಾದ ಹಸಿರು ಕಾಡು, ಸಮೃದ್ಧ ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನು ಹೊಂದಿರುವ ಸಿಕ್ಕಿಂ ಭಾರತದ ಅತೀ ಸುಂದರ ರಾಜ್ಯ ಎಂದರೆ ತಪ್ಪಾಗಲಾರದು. ಇದರ ಕ್ರೆಡಿಟ್ ಅಲ್ಲಿನ ಅರಣ್ಯ ನಿಯಮಗಳು, ಪರಿಸರ ಕಾನೂನುಗಳು, ವನ್ಯಜೀವಿ ನಿರ್ವಹಣಾ ಇಲಾಖೆಗೆ ಸಲ್ಲಬೇಕಿದೆ.
ಇದೀಗ ಸಿಕ್ಕಿಂನ ಪ್ರಕೃತಿ ಸಂರಕ್ಷಣಾ ನಿಯಮಕ್ಕೆ ಮತ್ತೊಂದು ಗರಿ ಎಂಬಂತೆ ಅಲ್ಲಿನ ನಾಗರಿಕರನ್ನು ಸಸ್ಯ, ಮರಗಳೊಂದಿಗೆ ಗಾಢ ಬಾಂಧವ್ಯ ಬೆಸೆಯಲು ಉತ್ತೇಜನ ನೀಡುತ್ತಿದೆ. ಮರಗಳನ್ನು ದತ್ತುಪಡೆಯುವಂತೆ ಕರೆ ನೀಡಲಾಗುತ್ತಿದೆ.
ಯಾವುದೇ ಖಾಸಗಿ ಅಥವಾ ಸರ್ಕಾರಿ ಜಾಗದಲ್ಲಿರುವ ಮರಗಳನ್ನು ದತ್ತುಪಡೆದುಕೊಂಡು ಅದನ್ನು ನಿಮ್ಮ ಸಹೋದರ, ಸಹೋದರಿಯಂತೆಯೇ ಕಾಣಿರಿ, ಪೋಷಿಸಿರಿ ಎಂದು ಜನರಿಗೆ ಜಾಹೀರಾತನ್ನು ಸಿಕ್ಕಿಂ ಸರ್ಕಾರ ನೀಡುತ್ತಿದೆ.
ತಮ್ಮನ್ನು ಅಗಲಿದವರ ಕುಟುಂಬ ಸದಸ್ಯರ ಹೆಸರಿನಲ್ಲಿ ಮರಗಳನ್ನು ದತ್ತುಪಡೆದು ಅವರಿಗೆ ನೀಡುತ್ತಿದ್ದ ಪ್ರೀತಿಯನ್ನು ಮರಕ್ಕೆ ನೀಡಿ, ಈ ಮರವನ್ನು ನಾವು ಸ್ಮೃತಿ ಮರ ಎಂದು ಗುರುತಿಸುತ್ತೇವೆ ಎಂದು ಅಭಿಯಾನ ಆರಂಭಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.