ನವದೆಹಲಿ: ಪ್ರತಿ ವರ್ಷದಂತೆ ಈ ಬಾರಿಯೂ ಅಪ್ರತಿಮ ಸಾಹಸ ಮೆರೆದ ಬಾಲಕ ಬಾಲಕಿಯರಿಗೆ ಭಾರತ್ ಅವಾರ್ಡ್, ಗೀತಾ ಛೋಪ್ರಾ ಅವಾರ್ಡ್, ಸಂಜಯ್ ಛೋಪ್ರಾ ಅವಾರ್ಡ್, ಬಾಪು ಗೈದಾನಿ ಅವಾರ್ಡ್, ಸಾಮಾನ್ಯ ರಾಷ್ಟ್ರೀಯ ಶೌರ್ಯ ಅವಾರ್ಡ್ಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಈ ಬಾರಿ 11 ಬಾಲಕರು, 7 ಬಾಲಕಿಯರು ಸೇರಿದಂತೆ 18 ಮಂದಿ ಈ ಶೌರ್ಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಕೋರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕರಲ್ಲಿ ಒಬ್ಬನನ್ನು ರಕ್ಷಿಸಿ ತಾನೂ ನೀರು ಪಾಲಾದ ಕರ್ನಾಟಕದ ನೇತ್ರಾವತಿಗೆ ಮರಣೋತ್ತರವಾಗಿ ಗೀತಾ ಅವಾರ್ಡ್ ನೀಡಲಾಗುತ್ತಿದೆ. ಮಣಿಪುರದ ಲೋಕ್ರಾಪಮ್ ರಾಜೇಶ್ವರಿ ಚಾನೂ ಅವರಿಗೆ ಮರಣೋತ್ತರವಾಗಿ ಅವಾರ್ಡ್ ನೀಡಲಾಗುತ್ತಿದೆ.
ಅಕ್ರಮ ಉದ್ಯಮ, ಬೆಟ್ಟಿಂಗ್ ದಂಧೆಯನ್ನು ಬಯಲು ಮಾಡಿದ ಉತ್ತರಪ್ರದೇಶದ ನಾಝಿಯಾ, ಮಿಜೋರಾಂನ ಲಾಲ್ಚಂದಮ, ಪಂಜಾಬ್ನ ಕರಣ್ಬೀರ್ ಸಿಂಗ್, ಒರಿಸ್ಸಾದ ಮಮತಾ ದಲೈ, ಸಬಾಸ್ಟಿನ್ ವೆನ್ಸೆಂಟ್, ಬೆಸ್ತ್ವೋಜಾನ್ ಪೆಂಲಾನ್ ಸೇರಿದಂತೆ 18 ಮಂದಿಗೆ ವಿವಿಧ ಕೆಟಗರಿಗಳಲ್ಲಿ ಶೌರ್ಯ ಪ್ರಶಸ್ತಿ ದೊರೆಯುತ್ತಿದೆ.
ಈ ಎಲ್ಲ ಬಾಲಕ ಬಾಲಕಿಯರು ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದು ಸನ್ಮಾನಿತರಾಗಲಿದ್ದಾರೆ ಹಾಗೂ ಆವತ್ತಿನ ದಿನ ನಡೆಯುವ ಪರೇಡ್ನಲ್ಲೂ ಇವರು ಭಾಗಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.