ಇಂದಿನ ಕಾಲದಲ್ಲಿ 10 ರೂಪಾಯಿಗೆ ಒಂದು ಕಪ್ ಟೀ ಕೂಡ ಬರುವುದಿಲ್ಲ. ಅಂತಹುದರಲ್ಲಿ ಸುಳ್ಯದ ಹೋಟೆಲ್ವೊಂದು ತನ್ನ ಗ್ರಾಹಕರಿಗೆ 10 ರೂಪಾಯಿಗೆ ಹೊಟ್ಟೆ ತುಂಬ ಊಟ ಕೊಡುತ್ತಿದೆ.
ಅಚ್ಚರಿಯೆಂದರೆ ಸುಳ್ಯದ ಶ್ರೀಯಮಪೇಟೆಯಲ್ಲಿ ವೆಂಕಟೇಶ ಸರಳಾಯ ಅವರು 78 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ರಾಮ್ ಪ್ರಸಾದ್ ಹೋಟೆಲ್ನಲ್ಲಿ 10.ರೂಗೆ ಊಟ ಸಿಗುತ್ತಿದೆ. ಈ ಹೋಟೆಲ್ ಸರಲಾಯ ಹೋಟೆಲ್ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ.
ಅನ್ನ, ಸಾಂಬಾರ್, ರಸಂ, ಪಳ್ಯ, ಮೊಸರನ್ನೊಳಗೊಂಡ ಭೋಜನವನ್ನು ಇಲ್ಲಿ ಸಿಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ಹಸಿವು ನೀಗಿಸಿಕೊಳ್ಳುತ್ತಾರೆ.
1938ರಲ್ಲಿ ಈ ಹೋಟೆಲ್ 25 ಪೈಸೆಗೆ ಊಟ ಕೊಡುತ್ತಿದೆ. 2014ರಲ್ಲಿ ಈ ಮೊತ್ತ ರೂ.5ಕ್ಕೆ ಏರಿತು. ಇದೀಗ ರೂ.10ಕ್ಕೆ ಊಟ ನೀಡುತ್ತಿದೆ. ಇದೀಗ ವೆಂಕಟೇಶ್ ಅವರ ಮಗ ಸುಂದರ ಸರಳಾಯ ಹೋಟೆಲ್ ಮುನ್ನಡೆಸುತ್ತಿದ್ದಾರೆ. ದಿನಕ್ಕೆ 200 ಮಂದಿ ಇಲ್ಲಿಗೆ ಆಗಮಿಸಿ ಊಟ ಸವಿಯುತ್ತಾರೆ.
ಊಟವನ್ನು ಬಿಟ್ಟು ಉಳಿದ ಎಲ್ಲಾ ತಿಂಡಿಗಳ ದರವನ್ನು ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ನಿಗದಿಪಡಿಸಿದ್ದೇವೆ, ಹೀಗಾಗಿ ಊಟದ ದರವನ್ನು ಕಡಿಮೆ ಕೊಡುವುದು ನಷ್ಟ ಅನಿಸುವುದಿಲ್ಲ. ಈಗಲೂ ಕೆಲವರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಾರೆ, ಅವರಿಗೆ ಸಹಾಯಕವಾಗಲಿ ಎಂಬ ಕಾರಣಕ್ಕೆ ದರವನ್ನು ಕಡಿಮೆ ಮಾಡಿದ್ದೇವೆ ಎಂದು ಸುಂದರ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.