ನವದೆಹಲಿ: ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿಯಿಟ್ಟುಕೊಂಡಿರುವ ಪ್ರಧಾನ ಮಂತ್ರಿ ಹರ್ ಘರ್ ಸಹಜ್ ಬಿಜ್ಲಿ ಯೋಜನಾ(ಸೌಭಾಗ್ಯ) ಯೋಜನೆಯಡಿ ಕೇಂದ್ರ ಸರ್ಕಾರ ಕಿರು ಚಿತ್ರ ನಿರ್ಮಾಣ ಸ್ಪರ್ಧೆಯನ್ನು ಏರ್ಪಡಿಸಿದೆ.
ಸೌಭಾಗ್ಯ ಯೋಜನೆ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಸಾಮಾನ್ಯ ಜನರನ್ನು ಯೋಜನೆಯ ರಾಯಭಾರಿಗಳನ್ನಾಗಿಸುವ ಸಲುವಾಗಿ ಕಿರು ಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ.
ಜನವರಿ 10ರಿಂದ ಜನವರಿ 31ರೊಳಗೆ ಸ್ಪರ್ಧೆಗೆ ಪ್ರವೇಶ ಪಡೆದುಕೊಳ್ಳಬೇಕು.
ರಾಷ್ಟ್ರ ನಿರ್ಮಾಣದಲ್ಲಿ ವಿದ್ಯುದೀಕರಣದ ಪಾತ್ರ, ಮಹಿಳಾ ಸಬಲೀಕರಣದಲ್ಲಿ ವಿದ್ಯುದೀಕರಣದ ಪ್ರಭಾವದ ಬಗೆಗಿನ ನೈಜ ಕಥೆ, ಉದ್ಯಮ ವಲಯದಲ್ಲಿ ವಿದ್ಯುದೀಕರಣ ವಹಿಸಿದ ಪಾತ್ರದ ಬಗೆಗಿನ ನೈಜ ಕಥೆ, ಆರೋಗ್ಯ ಕ್ಷೇತ್ರದಲ್ಲಿ ವಿದ್ಯುದೀಕರಣ ವಹಿಸಿದ ಪಾತ್ರದ ಬಗೆಗಿನ ನೈಜ ಕಥೆ, ಶಿಕ್ಷಣದಲ್ಲಿ ವಿದ್ಯುದೀಕರಣ ವಹಿಸಿದ ಪಾತ್ರದ ಬಗೆಗಿನ ನೈಜ ಕಥೆ, ಕೃಷಿಯಲ್ಲಿ ವಿದ್ಯುದೀಕರಣ ವಹಿಸಿದ ಪಾತ್ರದ ಬಗೆಗಿನ ನೈಜ ಕಥೆ-ಈ ಕೆಟಗರಿಗಳಲ್ಲಿ ಕಿರುಚಿತ್ರವನ್ನು ಆಹ್ವಾನಿಸಲಾಗಿದೆ.
ಕಿರುಚಿತ್ರದ ವಿಡಿಯೋ 3 ನಿಮಿಷಗಳನ್ನು ದಾಟಬಾರದು ಎಂಬ ನಿಯಮವಿದೆ. www.saubhagya.gov.in. ನಲ್ಲಿ ಕಿರುಚಿತ್ರವನ್ನು ಅಪ್ಲೋಡ್ ಮಾಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.