ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗ್ರೇಟರ್ ನೊಯ್ಡಾದ ಗೌತಮ್ ಬುದ್ಧ ಯೂನಿವರ್ಸಿಟಿಯಲ್ಲಿ ಆಯೋಜಿಸಲಾಗಿರುವ ‘ರಾಷ್ಟ್ರೀಯ ಯುವ ದಿನಾಚರಣೆ’ಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ‘ನಮ್ಮ ಇಸ್ರೋ ವಿಜ್ಞಾನಿಗಳು ನಮ್ಮನ್ನು ಮತ್ತೊಮ್ಮೆ ಹೆಮ್ಮೆ ಪಡುವಂತೆ ಮಾಡಿದ್ದಾರೆ, ಇಂದು ಇಸ್ರೋ ಸೆಟ್ಲೈಟ್ ಉಡಾವಣೆಯಲ್ಲಿ ಶತಮಾನೋತ್ಸವ ಪೂರೈಸಿದೆ’ ಎಂದರು.
‘ಬಾಹ್ಯಾಕಾಶದಲ್ಲಿ ನಮ್ಮ ದಾಪುಗಾಲು ನಮ್ಮ ನಾಗರಿಕರಿಗೆ ಸಹಾಯಕವಾಗಲಿದೆ ಮತ್ತು ನಮ್ಮ ಅಭಿವೃದ್ಧಿ ಪ್ರಯಾಣಕ್ಕೆ ಪೂರಕವಾಗಲಿದೆ’ ಎಂದರು.
‘ಜನರು ಹೇಳುತ್ತಾರೆ ಇಂದಿನ ಯುವಜನತೆಗೆ ತಾಳ್ಮೆ ಇಲ್ಲ ಎಂದು, ಇದೇ ಅವರ ಹಿಂದಿರುವ ಇನ್ನೋವೇಶನಿನ ಕಾರಣ’ ಎಂದಿದ್ದಾರೆ.
‘ಪ್ರತಿ ಜಿಲ್ಲೆಯಲ್ಲೂ ಅಣಕು ಸಂಸತ್ತುಗಳನ್ನು ನಡೆಸುವಂತೆ ಹೇಳಿದ್ದೇನೆ, ಇದರಿಂದಾಗಿ ಯುವಕರ ಚರ್ಚೆಯ ಗುಣಗಳಿಗೆ ಉತ್ತೇಜನ ದೊರಕಲಿದೆ’ ಎಂದಿದ್ದಾರೆ.
’ನಾವು 1947ರ ಬಳಿಕ ಹುಟ್ಟದವರಾದ್ದರಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ನಮಗೆ ಸಿಕ್ಕಿಲ್ಲ, ಆದರೆ ಶ್ರೇಷ್ಠ ನಾಯಕ, ನಾಯಕಿಯರ ಕನಸನ್ನು ನನಸು ಮಾಡುವ ಸಲುವಾಗಿ ನಾವು ಹೋರಾಡೋಣ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.