ಹೈದರಾಬಾದ್: 2019ರ ಅಕ್ಟೋಬರ್ 2ರೊಳಗೆ ಸಂಪೂರ್ಣ ದೇಶವನ್ನು ಬಯಲು ಶೌಚಮುಕ್ತಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಯುವ ಸಮುದಾಯ ಅದರಲ್ಲೂ ಹೆಣ್ಣು ಮಕ್ಕಳು ಈ ಗುರಿಯನ್ನು ತಲುಪುವತ್ತ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ, ಶೌಚಾಲಯ ತಮ್ಮ ಗೌರವದ ಪ್ರತೀಕ ಎಂದು ಭಾವಿಸಿದ್ದಾರೆ.
ಆಂಧ್ರಪ್ರದೇಶದ ಪ್ರಕಾಸಂ ಜಿಲ್ಲೆಯ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿನಿಯೊಬ್ಬಳು ತನ್ನ ಪೋಷಕರಿಗೆ ಪತ್ರ ಬರೆದು, ಸಂಕ್ರಾಂತಿ ಹಬ್ಬದೊಳಗೆ ಮನೆಯಲ್ಲಿ ಟಾಯ್ಲೆಟ್ ನಿರ್ಮಿಸಿ ಇಲ್ಲವೆ ನಾನು ಮನೆಗೆ ಬರುವುದಿಲ್ಲ ಎಂದು ಸಂದೇಶ ಕಳುಹಿಸಿದ್ದಾಳೆ.
ಶಾಲೆಯಲ್ಲಿ ಶಿಕ್ಷಕರು ಬಯಲು ಶೌಚ ಅನಾರೋಗ್ಯಕರ ಎಂಬುದನ್ನು ನಮಗೆ ತಿಳಿಸಿದ್ದಾರೆ. ಮನೆಯವರಿಗೂ ನಾನು ಇದನ್ನೇ ಹೇಳುತ್ತಿದ್ದೇನೆ. ಅವರು ಟಾಯ್ಲೆಟ್ ನಿರ್ಮಿಸಿದರೆ ಮಾತ್ರ ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಹೋಗುತ್ತೇನೆ ಎಂದಿದ್ದಾಳೆ.
ಈಗಾಗಲೇ ದೇಶದ ಹಲವು ಕಡೆ ಹೆಣ್ಣು ಮಕ್ಕಳು ಉಪವಾಸ ಕೂತು, ಪ್ರತಿಭಟನೆ ನಡೆಸಿ ಮನೆಯವರನ್ನು ಶೌಚಾಲಯ ನಿರ್ಮಾಣಕ್ಕೆ ಒಪ್ಪಿಸಿದ್ದಾರೆ. ಇದು ದೇಶದಲ್ಲಿ ಬದಲಾವಣೆಯಾಗುತ್ತಿದೆ ಎಂಬುದರ ಪ್ರತೀಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.