ನವದೆಹಲಿ: ಪಾರದರ್ಶಕತೆ ಮತ್ತು ನಗದು ರಹಿತ ದೇಣಿಗೆಯನ್ನು ಪಡೆಯುವಲ್ಲಿ ಚುನಾವಣಾ ಬಾಂಡ್ ಸ್ಕೀಮ್ ಮಹತ್ವದ ಪಾತ್ರವನ್ನು ನಿಭಾಯಿಸುತ್ತದೆ ಎಂಬುದಾಗಿ ಅರುಣ್ ಜೇಟ್ಲಿ ಅಭಿಪ್ರಾಯಿಸಿದ್ದಾರೆ.
ಈ ಸ್ಕೀಮ್ನಲ್ಲಿ ದಾನಿ ಮತ್ತು ದೇಣಿಗೆ ಪಡೆಯುವ ಪಕ್ಷಗಳು, ದಾನದ ಮೊತ್ತ, ಖರ್ಚಿನ ವಿಧಾನ ಎಲ್ಲವೂ ಬಹಿರಂಗವಾಗಿ ನಡೆಯುತ್ತದೆ. ಪಾರದರ್ಶಕವಲ್ಲದ ವ್ಯವಸ್ಥೆಯನ್ನು ಕಿತ್ತು ಹಾಕಲು ಇದು ಸಹಕಾರಿ ಎಂದಿದ್ದಾರೆ.
ಎಲ್ಲಾ ದಾನಿಗಳು ಮತ್ತು ದೇಣಿಗೆ ಪಡೆದುಕೊಂಡ ಪಕ್ಷಗಳು ತಾವು ನೀಡಿದ ದಾನದ ಮೊತ್ತವನ್ನು, ಅದನ್ನು ಖರೀದಿಸಿದ ವಿಧಾನವನ್ನು ತಮ್ಮ ಅಕೌಂಟ್ಗಳಲ್ಲಿ ಬಹಿರಂಗಪಡಿಸಬೇಕು ಎಂದಿದ್ದಾರೆ.
ಇತ್ತೀಚಿಗಷ್ಟೇ ಚುನಾವಣಾ ಬಾಂಡ್ ಸ್ಕೀಮ್ನ್ನು ಸಂಸತ್ತಿನಲ್ಲಿ ಜೇಟ್ಲಿ ಅನಾವರಣಗೊಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.