ಮುಂಬಯಿ: ಮುಂಬಯಿಯ ಕಮಲಾ ಮಿಲ್ಸ್ನ ರೂಫ್ಟಾಪ್ ಪಬ್ನಲ್ಲಿ ಕಳೆದ ಗುರುವಾರ ನಡೆದಿದ್ದ ಅಗ್ನಿ ಅನಾಹುತದಲ್ಲಿ 14 ಮಂದಿ ಪ್ರಾಣ ಕಳೆದುಕೊಂಡಿದ್ದರು. 19 ಜನ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು.
ಈ ಅಗ್ನಿ ಅನಾಹುತದ ವೇಳೆ ಯುವತಿಯೊಬ್ಬಳನ್ನು ರಕ್ಷಿಸಿದ ಮತ್ತು ಅಗ್ನಿಗೆ ಆಹುತಿ ಆಗುವ ಮೊದಲೇ ಮೂರು ಶವಗಳನ್ನು ಹೊರಗೆಳೆದು ಹಾಕಿದ್ದ ಕಾನ್ಸ್ಸ್ಟೇಬಲ್ ಸುದರ್ಶನ್ ಶಿಂಧೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದಾರೆ.
ಅಗ್ನಿ ಹೊತ್ತಿಕೊಂಡ ಸಂದರ್ಭದಲ್ಲಿ ನೆರವಿಗೆ ಧಾವಿಸಿದವರಲ್ಲಿ ಶಿಂಧೆ ಮೊದಲಿಗರು. ಈ ವೇಳೆ ಗಾಯಗೊಂಡು ಬೆಂಕಿಯ ಸಮೀಪ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಹೆಗಲಲ್ಲಿ ಹೊತ್ತುಕೊಂಡು ಅವರು ಹೊರೆ ನಡೆದು ಆಕೆ ಜೀವ ಉಳಿಸಿದ್ದಾರೆ. ಅಲ್ಲದೇ ಇತರರು ಧಾವಿಸುವ ಮುನ್ನವೇ ಮೂರು ಶವಗಳನ್ನು ಹೊರಕ್ಕೆ ತಂದಿದ್ದಾರೆ.
ಯುವತಿ, ಮೂರು ಶವಗಳನ್ನು ಸುರಕ್ಷಿತ ಸ್ಥಳಕ್ಕೆ ತರಲು ಅವರು 7 ಮಹಡಿಗಳನ್ನು ಹತ್ತಿ ಇಳಿದಿದ್ದಾರೆ. ಅವರ ಈ ಕಾರ್ಯಕ್ಕೆ ಭಾರೀ ಶ್ಲಾಘನೆಗಳು ಸಿಕ್ಕಿವೆ. ಪೊಲೀಸ್ ಇಲಾಖೆ ಸನ್ಮಾನವನ್ನೂ ಮಾಡಿದೆ. ನಾಗರಿಕರ ಪಾಲಿಗೆ ಹೀರೋ ಎನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.