ಬೆಂಗಳೂರು: ಸಂಸ್ಕೃತ ಪತ್ರಿಕೋದ್ಯಮ ಕ್ಷೇತ್ರಕ್ಕೆ ಗಣನೀಯ ಕೊಡುಗೆಗಳನ್ನು ನೀಡಿದ ಡಾ.ಜನಾರ್ದನ ಹೆಗಡೆಯವರು ಉತ್ತರಪ್ರದೇಶ ಸಂಸ್ಕೃತ ಸಂಸ್ಥಾನದ ಪ್ರತಿಷ್ಠಿತ 2017ನೇ ಸಾಲಿನ ‘ಮಹರ್ಷಿ ನಾರದ ಪ್ರಶಸ್ತಿ’ಗೆ ಬಾಜನರಾಗಿದ್ದಾರೆ.
ಹೆಗಡೆಯವರು ‘ಸಂಭಾಷಣ ಸಂದೇಶಃ’ ಎಂಬ ಸಂಸ್ಕೃತ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದಾರೆ. ಸಂಸ್ಕೃತ ಪತ್ರಿಕೋದ್ಯಮಕ್ಕೆ ಅವರು ನೀಡಿದ ಗಣನೀಯ ಸೇವೆಯನ್ನು ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
‘ಮಹರ್ಷಿ ನಾರದ ಪ್ರಶಸ್ತಿ’ಯು 1,01,000.ರೂ ನಗದನ್ನು ಒಳಗೊಂಡಿದೆ.
ಡಾ.ಎಚ್.ಆರ್ ವಿಶ್ವಾಸ್ ಅವರು ಸಂಸ್ಕೃತ ಸಂಸ್ಥಾನದ 2017ನೇ ಸಾಲಿನ ‘ಬಾನಭಟ್ಟ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕನ್ನಡದ ಎಸ್.ಎಲ್ ಭೈರಪ್ಪನವರು ಬರೆದ ’ದಾಟು’ ಕೃತಿಯನ್ನು ಸಂಸ್ಕೃತಕ್ಕೆ ’ಉಲ್ಲಂಘನಂ’ ಆಗಿ ಭಾಷಾಂತರ ಮಾಡಿದಕ್ಕೆ ಅವರಿಗೆ ಈ ಪ್ರಶಸ್ತಿ ದೊರೆತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.