ನೊಯ್ಡಾ : ಮಾನವೀಯತೆ ಭೂಮಿ ಮೇಲೆ ಇನ್ನೂ ಉಳಿದುಕೊಂಡಿದೆ ಎಂಬುದಕ್ಕೆ ಸಾಕ್ಷಿ ನೊಯ್ಡಾ ಮೂಲದ ಈ ಹೋರಾಟಗಾರನೆ ಸಾಕ್ಷಿ. ಅನೂಪ್ ಖನ್ನಾ ಪ್ರತಿನಿತ್ಯ ಸುಮಾರು 500 ಜನರಿಗೆ ರೂ.5ಕ್ಕೆ ಹೊಟ್ಟೆ ತುಂಬ ಅನ್ನ ನೀಡುವ ಕಾಯಕವನ್ನು ಮಾಡುವ ಮೂಲಕ ಬಡವರ ಪಾಲಿನ ದೇವರಾಗಿದ್ದಾರೆ.
ಎರಡು ವರ್ಷಗಳ ಹಿಂದೆ ‘ದಾದಿ ಕಿ ರಸೋಯಿ’ ಅಭಿಯಾನ ಆರಂಭಿಸಿರುವ ಇವರು ಅಲ್ಲಿಂದ ಬಡವರಿಗೆ ಸಹಾಯ ಮಾಡುವ ಕಾರ್ಯವನ್ನು ಮುಂದುವರೆಸಿಕೊಂಡೇ ಬರುತ್ತಿದ್ದಾರೆ. ನೊಯ್ಡಾದಲ್ಲಿ ಎರಡು ಸ್ಟಾಲ್ಗಳನ್ನು ಇಟ್ಟು ಪ್ರತಿನಿತ್ಯ ರೂ.5ಕ್ಕೆ ದಾಲ್, ರೈಸ್, ರೋಟಿ ಮತ್ತಿತರ ತರಕಾರಿಗಳನ್ನೊಳನ್ನು ನೀಡುತ್ತಾರೆ.
ತಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಅವರ ಉತ್ತಮ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬ ಕಾರಣಕ್ಕೆ ಈ ಕಾರ್ಯ ಮಾಡುತ್ತಿದ್ದೇನೆ ಎಂದು ಅನೂಪ್ ಹೇಳುತ್ತಾರೆ.
ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬಡವರು ಹೀಗೆ ಬೇರೆ ಬೇರೆ ಜನರು ಇವರಲ್ಲಿಗೆ ಬಂದು ಹೊಟ್ಟೆ ತುಂಬ ತಿಂದು ತೃಪ್ತರಾಗುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.