ನವದೆಹಲಿ: ಕುಡಿದು ಚಾಲನೆ ಮಾಡಿ ಇನ್ನೊಬ್ಬರ ಸಾವಿಗೆ ಕಾರಣರಾಗುವ ಚಾಲಕರಿಗೆ ನೀಡುವ ಶಿಕ್ಷೆಯ ಪ್ರಮಾಣವನ್ನು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಇಂತಹ ಚಾಲಕರಿಗೆ 2 ವರ್ಷ ಸೆರೆವಾಸ ಮತ್ತು ದಂಡದ ಶಿಕ್ಷೆ ಇದೆ. ಇದನ್ನು ಏಳು ವರ್ಷಕ್ಕೆ ಏರಿಸಲು ನಿರ್ಧರಿಸಲಾಗಿದೆ.
ಕುಡಿದು ಚಲಾವಣೆ ಮಾಡಿ ಇನ್ನೊಬ್ಬರ ಸಾವಿಗೆ ಕಾರಣರಾದ ಚಾಲಕರ ಶಿಕ್ಷೆಯ ಅವಧಿಯನ್ನು 7 ವರ್ಷಗಳಿಗೆ ಏರಿಕೆ ಮಾಡಲಾಗುತ್ತಿದೆ, ಮಾತ್ರವಲ್ಲದೇ ಲೈಫ್ ಟೈಮ್ ಥರ್ಡ್ ಪಾರ್ಟಿ ಇನ್ಸುರೆನ್ಸ್ನ್ನು ರಿಜಿಸ್ಟ್ರೇಶನ್ ಸಂದರ್ಭದಲ್ಲಿ ಎಲ್ಲಾ ವಾಹನಗಳಿಗೂ ಕಡ್ಡಾಯಗೊಳಿಸಿದೆ.
ಕುಡಿತದ ಅಮಲಿನಲ್ಲಿ ವಾಹನಗಳನ್ನು ಚಲಾಯಿಸಿ ಇನ್ನೊಬ್ಬರನ್ನು ಸಾವಿಗೆ ದೂಡುವ ಪ್ರಕರಣವನ್ನು ‘ಉದ್ದೇಶಪೂರ್ವಕವಲ್ಲದ ನರಹತ್ಯೆ’ ಎಂದು ಪರಿಗಣಿಸಲಾಗುತ್ತದೆ, ಈ ಪ್ರಕರಣದಡಿ ವ್ಯಕ್ತಿ ಗರಿಷ್ಠ 10 ವರ್ಷದವರೆಗೂ ಸೆರೆವಾಸ ಅನುಭವಿಸಬೇಕಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.