‘ಲಂಗರ್ ಬಾಬಾ’ ಎಂದೇ ಪ್ರೀತಿಯಿಂದ ಕರೆಯಲ್ಪಡುವ 83 ವರ್ಷದ ಜಗದೀಶ್ ಲಾಲ್ ಅಹುಜಾ ಕಳೆದ ಮೂರು ದಶಕಗಳಿಂದ ಬಡ ಮಕ್ಕಳ ಹಸಿದ ಹೊಟ್ಟೆಗೆ ಅನ್ನ ನೀಡುವ ಪುಣ್ಯದ ಕಾಯಕ ಮಾಡುತ್ತಾ ಬರುತ್ತಿದ್ದಾರೆ. ತಮ್ಮಲ್ಲಿನ ಆಸ್ತಿಗಳನ್ನು ಇದಕ್ಕಾಗಿ ಮಾರಾಟ ಮಾಡಿದ್ದಾರೆ.
ಪಾಕಿಸ್ಥಾನದ ಪೇಶಾವರದಲ್ಲಿ ಹುಟ್ಟಿದ ಇವರು 1947ರಲ್ಲಿ ವಿಭಜನೆಯ ಬಳಿಕ ಭಾರತಕ್ಕೆ ಬಂದರು. ಈ ವೇಳೆ ತಮ್ಮ ಹುಟ್ಟೂರು ಮಾತ್ರವಲ್ಲ ಬಾಲ್ಯವನ್ನೂ ಕಳೆದುಕೊಂಡು ಒದ್ದಾಡಿದರು, ಬಾಲ್ಯದ ಕಹಿ ನೆನಪನ್ನು ಅವರಿಂದು ನೆನಪಿಸಿಕೊಳ್ಳಲೂ ಇಷ್ಟಪಡುವುದಿಲ್ಲ. ತಾವು ಅನುಭವಿಸಿದ ಕಷ್ಟ ಬೇರೆ ಮಕ್ಕಳಿಗೆ ಬರಬಾರದು ಎಂಬ ಕಾರಣಕ್ಕೆ ಅಲಲ್ಲಿ ತೆರಳಿ ನಿತ್ಯ ಹಸಿದ ಮಕ್ಕಳಿಗೆ ಆಹಾರ ವಿತರಿಸುತ್ತಿದ್ದಾರೆ. ಅಲ್ಲಲ್ಲಿ ಭೋಜನ ವ್ಯವಸ್ಥೆಗಳನ್ನು ಆಯೋಜಿಸುತ್ತಾರೆ.
ಸ್ವಂತ ಪರಿಶ್ರಮದಿಂದ ಸ್ಥಿತಿವಂತರಾಗಿರುವ ಅವರು ಆಸ್ತಿಗಳನ್ನು ಮಾರಟ ಮಾಡಿ ಮಕ್ಕಳಿಗೆ ಆಹಾರ ನೀಡುತ್ತಾರೆ. ಅವರ ಮಕ್ಕಳು ಕೂಡ ಸ್ವಂತ ಉದ್ಯಮವನ್ನು ನಡೆಸುತ್ತಿದ್ದು, ಇವರ ಕಾರ್ಯಕ್ಕೆ ಉತ್ತೇಜನ ನೀಡುತ್ತಾರೆ. ಜನರು ಪ್ರೀತಿಯಿಂದ ಇವರನ್ನು ’ಲಂಗರ್ ಬಾಬಾ’ ಎಂದೇ ಕರೆಯುತ್ತಾರೆ. ಅನ್ನ ದಾಸೋಹಗಳಿಗೆ ಪಂಜಾಬ್ನಲ್ಲಿ ಲಂಗರ್ ಎಂದು ಕರೆಯುತ್ತಾರೆ. ೨೦೦೧ರಿಂದ ಇವರು ಲಂಗರ್ಗಳನ್ನು ಆಯೋಜಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.