ನವದೆಹಲಿ: ಸಿಕ್ಕಿಂನಲ್ಲಿ ಅಪರಾಜಿತ ರಾಯ್ ಎನ್ನುವುದು ಚಿರಪರಿಚಿತ ಹೆಸರು. ಆಕೆ ಆ ರಾಜ್ಯದ ಮೊತ್ತ ಮೊದಲ ಮಹಿಳಾ ಐಪಿಎಸ್ ಅಧಿಕಾರಿ. 2010 ಮತ್ತು 2011ರಲ್ಲಿ ಎರಡು ಬಾರಿ ಯುಪಿಎಸ್ಸಿ ಎಕ್ಸಾಂ ಬರೆದು ಎರಡು ಬಾರಿಯೂ ಉತ್ತೀರ್ಣರಾದ ಕೀರ್ತಿ ಇವರದ್ದು.
ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉನ್ನತ ರ್ಯಾಂಕ್ ಪಡೆದ ಮೊದಲ ಸಿಕ್ಕಿಂ ವ್ಯಕ್ತಿಯೂ ಇವರಾಗಿದ್ದಾರೆ. ತರಬೇತಿಯಲ್ಲೇ ಇವರು ’ಟ್ರೋಫಿ ಫಾರ್ ದಿ ಬೆಸ್ಟ್ ಲೇಡಿ ಔಟ್ಡೋರ್ ಪ್ರೊಬೆಷನರ್, ಶ್ರೀ ಉಮೇಸ್ ಚಂದ್ರ ಟ್ರೋಫಿ ಫಾರ್ ಫೀಲ್ಡ್ ಕಂಬಾತ್, ಪಶ್ಚಿಮಬಂಗಾಳದ ಸರ್ಕಾರದ ಟ್ರೋಫಿಗಳನ್ನು ಇವರು ಗೆದ್ದುಕೊಂಡಿದ್ದಾರೆ.
ವಿದ್ಯಾವಂತರ ಕುಟುಂಬದಲ್ಲಿ ಜನಿಸಿದರೂ ತಮ್ಮ ೮ನೇ ವಯಸ್ಸಿನಲ್ಲೇ ಇವರು ತಂದೆಯನ್ನು ಕಳೆದುಕೊಂಡರು. ಸರ್ಕಾರಿ ಉದ್ಯೋಗಿಗಳ ಭಾವನರಹಿತ ವರ್ತನೆಗಳನ್ನು ಹತ್ತಿರದಲ್ಲಿ ನೋಡಿದ್ದ ಇವರು ತಾನೆಂದಿಗೂ ಈ ರೀತಿ ವರ್ತಿಸಬಾರದು ಎಂಬುದನ್ನು ಮನಸ್ಸಲ್ಲಿ ನಿಶ್ಚಿಯಿಸಿಕೊಂಡಿದ್ದರು.
ಶಾಲೆಯಲ್ಲೂ ಜಾಣೆಯಾಗಿದ್ದ ಇವರು ಹತ್ತು ಹಲವು ಸ್ಪರ್ಧಾತಕ ಪರೀಕ್ಷೆಗಳನ್ನು ಬರೆದರು. ಕಾನೂನು ಪದವಿ ಗಿಟ್ಟಿಸಿಕೊಮಡರು. ಇಂದು ಅವರು ಸಿಕ್ಕಿಂ ರಾಜ್ಯದ ಮೊದಲ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಮಾತ್ರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.