ಮಂಗಳೂರು: ಮರಗಳಿಗೆ ಔಷಧಿಗಳನ್ನು ಸಿಂಪಡಿಸುವ ಕಾರ್ಯ ಸರಳವಾಗಿದೆ. ಬೆಳ್ತಂಗಡಿಯ ನಿಡ್ಲೆಯ ಅವಿನಾಶ್ ರಾವ್ ಮತ್ತು ಅವರ ಮೂರು ಮಂದಿ ಸ್ನೇಹಿತರು ಸೇರಿ ಔಷಧಿ ಸಿಂಪಡಣೆ ಮಾಡುವ ಡ್ರೋನ್ ಕಂಡುಹಿಡಿದಿದ್ದಾರೆ.
ದಕ್ಷಿಣಕನ್ನಡದ ಅಡಿಕೆ ಬೆಲೆಗಾರರಿಗೆ ಔಷಧಿ ಸಿಂಪಡಿಸಲು ಕಾರ್ಮಿಕರನ್ನು ಹುಡುಕುವುದೇ ದೊಡ್ಡ ಸಾಹಸ. ಹೀಗಾಗಿ ಅವಿನಾಶ್ ಮತ್ತವರ ಗೆಳೆಯರ ಈ ಆವಿಷ್ಕಾರ ಅವರಲ್ಲಿ ಆಶಾವಾದವನ್ನು ಮೂಡಿಸಿದೆ.
ನ.23ರಂದು ಇವರು ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆಯವರ ಸಮ್ಮುಖದಲ್ಲಿ ತಮ್ಮ ದ್ರೋನ್ನ್ನು ಅನಾವರಣಗೊಳಿಸಿದ್ದಾರೆ.
ನಿಡ್ಲೆಯಲ್ಲಿ ಈ ಗೆಳೆಯರು 2016ರಲ್ಲಿ ಐಎಸ್ಪಿ ಅಗ್ರೋ ರೊಬೊಟಿಕ್ಸ್ ಸ್ಥಾಪಿಸಿ, ನೋಂದಣಿ ಮಾಡಿದ್ದರು, ಬೆಂಗಳೂರಿನ ಪೀಣ್ಯದಲ್ಲಿ ಇದರ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಕಛೇರಿಯನ್ನೂ ಹೊಂದಿದ್ದಾರೆ. ಅಟೋಮೇಶನ್ ಮತ್ತು ಕಂಟ್ರೋಲ್ನಲ್ಲಿ ರಾವ್ ಪರಿಣತರಾಗಿದ್ದಾರೆ.
ಐಎಸ್ಪಿ ಅಗ್ರೋ ರೊಬೊಟಿಕ್ಸ್ ದಕ್ಷಿಣ ಕನ್ನಡದ ಮೊತ್ತ ಮೊದಲ ಸ್ಟಾರ್ಟ್ಅಪ್ ಎಂದೂ ಸರ್ಕಾರದಿಂದ ಪರಿಗಣಿಸಲ್ಪಟ್ಟಿದೆ. ಸರ್ಕಾರದಿಂದ ರೂ.50ಲಕ್ಷ ಅನುದಾನವೂ ಇವರಿಗೆ ಸಿಕ್ಕಿದೆ. ಈ ಸಂಸ್ಥೆ ಯೋಜಿಸಿರುವ 12 ಪ್ರಾಜೆಕ್ಟ್ಗಳಲ್ಲಿ ಔಷಧಿ ಸಿಂಪಡಿಸುವ ದ್ರೋನ್ ಕೂಡ ಒಂದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.