ದಂತೇವಾಡ: ನಕ್ಸಲ್ ಪಿಡಿತ ದಂತೇವಾಡದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಯಲ್ಲೇ ಸಾಗುವಂತೆ ಮಾಡಲು ಅವಿರತ ಪ್ರಯತ್ನ ಪಡುತ್ತಿದ್ದಾರೆ ಅಲ್ಲಿನ ಯುವ ಜಿಲ್ಲಾಧಿಕಾರಿ ಸೌರಭ್ ಕುಮಾರ್.
10, 12ನೇತರಗತಿಯ ಬಳಿಕ ವಿದ್ಯಾರ್ಥಿಗಳು ಸರಿಯಾದ ವ್ಯಾಸಂಗವನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡುವ ಇವರು, ವಿದ್ಯಾರ್ಥಿಗಳೊಂದಿಗೆ ಆಹಾರ ಸೇವಿಸುವ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಾರೆ. ಇದಕ್ಕೆ ‘ಲಂಚ್ ವಿದ್ ದಿ ಕಲೆಕ್ಟರ್’ ಎಂದು ಖ್ಯಾತವಾಗಿದೆ.
ಅಷ್ಟೇ ಅಲ್ಲದೇ ಅವರ ನೆತೃತ್ವದಲ್ಲಿ ದಂತೇವಾಡದ ಜಿಲ್ಲಾ ಕೇಂದ್ರ ಕಛೇರಿಯ ಗವರ್ಮೆಂಟ್ ಟ್ರಾನ್ಸಿಟ್ ಹಾಸ್ಟೆಲ್ನಲ್ಲಿ 2 ಗಂಟೆಗಳ ಕರಿಯರ್ ಕೌನ್ಸೆಲಿಂಗ್ ಸೆಷನ್ ಆಯೋಜನೆ ಮಾಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನಗಳನ್ನು ನೀಡಲಾಗುತ್ತದೆ.
ಪ್ರತಿ ಸೆಷನ್ಗೆ 50ರಿಂದ 100 ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಹಾಜರಾಗುತ್ತಾರೆ, ಅಲ್ಲಿ ಅವರ ಆಸಕ್ತಿ, ಅಧ್ಯಯನದ ಬಗ್ಗೆ ಕೇಳಲಾಗುತ್ತದೆ, ಇದನ್ನು ಸೌರಭ್ ಮತ್ತು ಅವರ ತಂಟ ನೋಟ್ ಮಾಡಿಕೊಳ್ಳುತ್ತದೆ, ಬಳಿಕ ಅವರಿಗೆ ಸರಿಯಾದ ಯೋಜನೆ ಹಾಕಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆ.
ಈ ಕಾರ್ಯದ ಮೂಲಕ ಸೌರಭ್ ದಂತೇವಾಡವನ್ನು ಹೆಚ್ಚು ಸುಶಿಕ್ಷಕತರ ಜಿಲ್ಲೆಯನ್ನಾಗಿ ಪರಿವರ್ತಿಸುತ್ತಿರುವುದು ಮಾತ್ರವಲ್ಲ, ನಕ್ಸಲ್ ಮುಕ್ತಗೊಳಿಸಲೂ ಪ್ರಯತ್ನಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.